ಬೆಳಗಾವಿ: ಬೆಳಗಾವಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರುಣ ಕುರುಬರ ಮತ್ತು ಕಿರಣ ಕುರುಬರ ಎಂಬುವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿಯ ಡಿಸಿ ಕಚೇರಿ ಸಮೀಪ ಆದಿತ್ಯ ಬೆಂಡಿಗೇರಿ ಎಂಬ ಯುವಕನಿಗೆ ಚಾಕುವಿನಿಂದ ಇರಿದಿದ್ದರು.
ಇರಿತದಿಂದ ಗಾಯಗೊಂಡಿದ್ದ ಬೆಳಗಾವಿ ತಾಲೂಕು ಕೆಕೆ ಕೊಪ್ಪ ನಿವಾಸಿ ಆದಿತ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳಾದ ಅದೇ ಗ್ರಾಮದ ಸಹೋದರರಾದ ಅರುಣ ಕುರುಬರ ಮತ್ತು ಕಿರಣ ಕುರುಬರ ಅವರ ಸಹೋದರಿಯನ್ನು ಚುಡಾಯಿಸಿದ್ದಕ್ಕೆ ರಾಜ್ಯೋತ್ಸವ ಮೆರವಣಿಗೆಯಲ್ಲಿ ಆದಿತ್ಯ ಕೊಲೆಗೆ ಯತ್ನಿಸಿ ಚಾಕುವಿನಿಂದ ಇರಿದಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
