BREAKING : ಮೈಸೂರಿನಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲು ಅಪಘಾತಕ್ಕೆ ಯತ್ನ : ಕಾರಣ ಬಿಚ್ಚಿಟ್ಟ ಕಿಡಿಗೇಡಿಗಳು!

ಮೈಸೂರು  :  ಮೈಸೂರು-ನಂಜನಗೂಡು ವಿಭಾಗದಲ್ಲಿ ನವೆಂಬರ್ 12 ರಂದು ರೈಲ್ವೇ ಹಳಿಯಲ್ಲಿ ಸ್ಟೀಲ್ ಸ್ಲೀಪರ್ ಮತ್ತು ಮರದ ದಿಮ್ಮಿಗಳನ್ನು ಹಾಕಿದ್ದ ಪ್ರಕರಣ ಸಂಬಂಧ ಕಿಡಿಗೇಡಿಗಳು ಕಾರಣ ಬಹಿರಂಗ ಪಡಿಸಿದ್ದಾರೆ.

ರೈಲ್ವೆ ಹಳಿಗಳ  ಮೇಲೆ ಕಿಡಿಗೇಡಿಗಳು ಮರದ ದಿಮ್ಮಿಗಳನ್ನು ಅಡ್ಡ ಇಟ್ಟು 400 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ರೈಲನ್ನು ಅಪಘಾತಕ್ಕೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಇದನ್ನು ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆ.

ಲೊಕೊ ಪೈಲಟ್  ಅಶ್ವಿನಿ ಕುಮಾರ್ ಅವರು ಚಾಮರಾಜನಗರ ಮತ್ತು ಮೈಸೂರು ನಡುವೆ ರೈಲು ಸಂಖ್ಯೆ 06275 ಅನ್ನು ಚಲಾಯಿಸುತ್ತಿದ್ದಾಗ ಸಂಜೆ ಈ ಘಟನೆ ನಡೆದಿದೆ.ಸಮಯ ಪ್ರಜ್ಞೆಯಿಂದ ಅವರು ರೈಲನ್ನು ನಿಲ್ಲಿಸಿ ಅಪಘಾತವನ್ನು ತಡೆದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ರೈಲ್ವೆ ಪೊಲೀಸರು ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು,  ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ರೈಲ್ವೇ ಕಾಯಿದೆ, 1989 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read