BREAKING: ‘ನಾಡು ಬಂಗಾರದ ಗಿಂಡೀಲೇ, ನಾಡು ಸಿರಿಯಾಯಿತಲೇ ಪರಾಕ್’: ವಿಜಯದಶಮಿಗೆ ವರ್ಷದ ಭವಿಷ್ಯವಾಣಿ ಗೊರವಯ್ಯ ಕಾರಣಿಕ ನುಡಿ: ಹೀಗಿದೆ ವಿಶ್ಲೇಷಣೆ…

ಹಾವೇರಿ: ‘ನಾಡು ಬಂಗಾರದ ಗಿಂಡಿ ನಾಡು ಸಿರಿಯಾದಿತಲೇ ಪರಾಕ್’ ಎಂದು ವಿಜಯದಶಮಿಯಂದು ದೇವರಗುಡ್ಡದ ಗೊರವಯ್ಯ ಕಾರಣಿಕ ನುಡಿದಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಸುಕ್ಷೇತ್ರ ದೇವರಗುಡ್ಡದ ಗೊರವಯ್ಯ ಕಾರಣಿಕ ನುಡಿದಿದ್ದಾರೆ. ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಭವಿಷ್ಯವಾಣಿ ನುಡಿಯಲಾಗಿದೆ.

ನಾಡಿನಾದ್ಯಂತ ಪ್ರಸಕ್ತ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ಹಿಂಗಾರು ಬೆಳೆ ಸಮೃದ್ಧವಾಗಿ ಬರಲಿದೆ ಎಂದು ದೈವ ವಾಣಿಯನ್ನು ವಿಶ್ಲೇಷಿಸಲಾಗಿದೆ.

ರಾಜಕೀಯವಾಗಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರಹೊಮ್ಮುತ್ತಾರೆ. ಪ್ರಸ್ತುತ ವರ್ಷದ ದೈವವಾಣಿ ನುಡಿದಿರುವ ನಾಗಪ್ಪ ಉರ್ಮಿ ಗೊರವಯ್ಯ ಒಂಬತ್ತು ದಿನ ಉಪವಾಸ ವ್ರತ ಮಾಡಿ 18 ಅಡಿ ಎತ್ತರದ ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ. ಕಾರಣಿಕವನ್ನು ವರ್ಷದ ಭವಿಷ್ಯವಾಣಿ ಎಂದೇ ಹೇಳಲಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read