BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ಕಾರಿನಲ್ಲಿ ಶವ ಸಾಗಾಟ ಮಾಡಿರುವುದು ‘FSL’ ವರದಿಯಲ್ಲಿ ಧೃಡ.!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇರ್ ಸ್ಯಾಂಪಲ್ ಪೊಲೀಸರ ಕೈ ಸೇರಿದ್ದು, ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿರುವುದು ಧೃಡವಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೇರ್ ಸ್ಯಾಂಪಲ್ ಪೊಲೀಸರ ಕೈ ಸೇರಿದೆ. ಕಾರಿನಲ್ಲಿ ಸಿಕ್ಕ ಹೇರ್ ಶ್ಯಾಂಪಲ್ ನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಆರೋಪಿಗಳಾದ ನಿಖಿಲ್ , ಕಾರ್ತಿಕ್, ರಾಘವೇಂದ್ರ ಅವರದ್ದು ಎನ್ನಲಾಗಿದೆ. ರೇಣುಕಾಸ್ವಾಮಿ ಶವ ಸಾಗಾಟದಲ್ಲಿ ನಿಖಿಲ್ , ಕಾರ್ತಿಕ್, ರಾಘವೇಂದ್ರ ಭಾಗಿಯಾಗಿದ್ದರು.

ಇತ್ತೀಚೆಗೆ ನಟ ದರ್ಶನ್ ಸೇರಿ 6 ಆರೋಪಿಗಳ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿರುವುದು ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಧೃಡವಾಗಿತ್ತು. ಕೃತ್ಯ ನಡೆದ ಸ್ಥಳಗಳಲ್ಲಿ ಸಿಕ್ಕ ದೊಣ್ಣೆ, ಬೆಲ್ಟ್ ಸೇರಿ ಹಲವು ವಸ್ತುಗಳಲ್ಲಿ ಇರುವ ರಕ್ತದ ಕಲೆ ರೇಣುಕಾಸ್ವಾಮಿಯದ್ದೇ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ಧೃಡವಾಗಿದೆ. ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಹಲವು ಎಫ್ಎಸ್ಎಲ್ ವರದಿ ಪೊಲೀಸರ ಕೈ ಸೇರಿದ್ದು, ಇದು ನಟ ದರ್ಶನ್ & ಗ್ಯಾಂಗ್ ಗೆ ಉರುಳಾಗುವ ಸಾಧ್ಯತೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read