BREAKING : ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ‘ಪವಿತ್ರ ಸ್ನಾನ’ ಮಾಡಿದ ಪ್ರಧಾನಿ ಮೋದಿ |WATCH VIDEO

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ (ಫೆಬ್ರವರಿ 5) ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಪ್ರಯಾಗ್ ರಾಜ್ ಗೆ ಇಂದು ತೆರಳಿದ ಮೋದಿ ಅವರು ಅರೈಲ್ ಘಾಟ್ ನಿಂದ ಸಂಗಮ ಘಾಟ್ ಗೆ ಬೋಟ್ ನಲ್ಲಿ ತೆರಳಿದ್ದಾರೆ. ನಂತರ ತ್ರಿವೇಣಿ ಸಂಗಮದಲ್ಲಿ ‘ಪವಿತ್ರ ಸ್ನಾನ’ ಮಾಡಿದ್ದಾರೆ. ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ.

ಕುಂಭ ಮೇಳ ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭಮೇಳದ ಸಮುದಲ್ಲಿ ಪ್ರಯಾಗ ರಾಜ್ನಲ್ಲಿ ನಡೆಯುವ ಐತಿಹಾಸಿಕ ಕುಂಭಮೇಳದಲ್ಲಿ ಸಾಧುಗಳ ಭಾಗವಹಿಸುವಿಕೆ ಪ್ರಮುಖವಾಗಿವೆ.ವಿವಿಧ ಅಖಾಡಗಳಿಗೆ ಸೇರಿದ ಸಾವಿರಾರು ಭೈರಾಗಿಗಳು ಪ್ರಯಾಗರಾಜ್ನಲ್ಲಿ ಮೇಳೈಸಿ, ಗಂಗಾ ನದಿ ದಡದಲ್ಲಿ ಬಿಡಾರ ಹೂಡುತ್ತಾರೆ.

 

ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ಮುಕ್ತಾಯದ ತೆರೆ ಬೀಳುತ್ತದೆ.

 

;

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read