BREAKING : ‘ಪ್ರವೀಣ್ ನೆಟ್ಟಾರು’ ಕೊಲೆ ಕೇಸ್ : ‘NIA’ ಯಿಂದ 6 ನೇ ಆರೋಪಿ ಮೊಹಮ್ಮದ್ ಷರೀಫ್ ಅರೆಸ್ಟ್.!

ಹಿಂದೂ ಕಾರ್ಯಕರ್ತ  ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ನೇ ಆರೋಪಿ ಮೊಹಮದ್  ಷರೀಪ್ ನನ್ನು ಬಂಧಿಸಲಾಗಿದೆ.ಪರಾರಿಯಾಗಿದ್ದ ಷರೀಪ್ ಪತ್ತೆಗೆ ಎನ್ ಐ ಎ ಅಧಿಕಾರಿಗಳು 5 ಲಕ್ಷ ಬಹುಮಾನ ಘೋಷಿಸಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ  ಮನೆ ಮೇಲೆ ಇತ್ತೀಚೆಗೆ ಎನ್ ಐ ಎ (NIA) ದಾಳಿ ನಡೆಸಿತ್ತು. ಕರ್ನಾಟಕದ 16 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು . ಎನ್ಐಎ ಆಗಸ್ಟ್ 4, 2022 ರಂದು ಸ್ಥಳೀಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿತ್ತು ಮತ್ತು ಜನವರಿ 2023 ರಲ್ಲಿ 21 ಆರೋಪಿಗಳ ವಿರುದ್ಧ ಚಾರ್ಜ್’ಶೀಟ್ ಸಲ್ಲಿಸಿತ್ತು.

ಏನಿದು ಪ್ರಕರಣ ?

ಪ್ರವೀಣ್ ನೆಟ್ಟಾರು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ಶಾಪ್ ಹೊಂದಿದ್ದು, 2022ರ ಜುಲೈ 26ರಂದು ರಾತ್ರಿ 8.30 ರ ಸುಮಾರಿಗೆ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಬಳಿಕ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಗೆ ವಹಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read