ನವದೆಹಲಿ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಮೂವರು ಮೋಸ್ಟ್ ವಾಟೆಂಡ್ ಎಲ್ ಇ ಟಿ ಉಗ್ರರು ಫಿನೀಶ್ ಆಗಿದ್ದಾರೆ.
ಹೌದು, ಈ ದಾಳಿಯಲ್ಲಿ ಪಾಕಿಸ್ತಾನದ ಮೋಸ್ಟ್ ವಾಟೆಂಡ್ ಎಲ್ ಇ ಟಿ ಉಗ್ರ ಅಬ್ದುಲ್ ಮಲೀಕ್ ಹಾಗೂ ಎಲ್ ಇ ಟಿ ಕಮಾಂಡರ್ ಮುದಾಸೀರ್ ಹಾಗೂ ಮತ್ತೋರ್ವ ಉಗ್ರ ಬದ್ರುದ್ದೀನ್ ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದಕರಿಗೆ ತರಬೇತಿ ನೀಡಲು ಮತ್ತು ಅಡಗುತಾಣಗಳಾಗಿ ಬಳಸುತ್ತಿದ್ದ ಪಾಕಿಸ್ತಾನದ ಮೂಲಸೌಕರ್ಯಗಳನ್ನು ಆಪರೇಷನ್ ಸಿಂಧೂರ್ ಮೂಲಕ ಭಾರತ ನಿಖರವಾಗಿ ಗುರಿಯಾಗಿಸಿಕೊಂಡಿದೆ.
ಮರ್ಕಜ್ ಸುಭಾನ್ ಅಲ್ಲಾಹ್ ಪಾಕಿಸ್ತಾನದ ಪಂಜಾಬ್ನ ಬಹವಾಲ್ಪುರದಲ್ಲಿ ಜೈಶ್-ಎ-ಮೊಹಮ್ಮದ್ನ ಕಾರ್ಯಾಚರಣೆಯ ಪ್ರಧಾನ ಕಚೇರಿಯಾಗಿದೆ. ಪುಲ್ವಾಮಾ ದಾಳಿಯ ದುಷ್ಕರ್ಮಿಗಳಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಯಿತು. ಇದು ಭಾರತದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹತ್ತಿರದ ಗಡಿಗಳನ್ನು ಹೊಂದಿದೆ.
Director General of Police, Uttar Pradesh tweets, "Red Alert declared in Uttar Pradesh following #OperationSindoor – the Indian Army’s targeted strike on terror hideouts. All UP Police field formations have been instructed to coordinate with Defence units and strengthen the… pic.twitter.com/Ao3m06GmIJ
— ANI (@ANI) May 7, 2025