BREAKING: ತಲೆ ಮೇಲೆ ಗ್ರಾನೈಟ್ ಬಿದ್ದು ಮಳಿಗೆ ಮಾಲೀಕ ಸಾವು

ಕಾರವಾರ: ಗ್ರಾನೈಟ್ ಮಳಿಗೆಯಲ್ಲಿ ಗ್ರಾನೈಟ್ ಬಿದ್ದು ಮಾಲೀಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಅಸ್ನೋಟಿಯಲ್ಲಿ ನಡೆದಿದೆ.

ಕಾರವಾರ ನಿವಾಸಿ ಮುದ್ದಣ ಹಲುಂಡಿ(53) ಮೃತಪಟ್ಟವರು ಎಂದು ಹೇಳಲಾಗಿದೆ. ಮಲ್ಲಿಕಾರ್ಜುನ ಟೈಲ್ಸ್ ಅಂಡ್ ಸೆರಾಮಿಕ್ಸ್ ಮಾಲೀಕರಾಗಿದ್ದ ಮುದ್ದಣ್ಣ ಕೊಪ್ಪಳ ಮೂಲದವರು. ಕಾರವಾರದ ಬಾಂಡಿಶಿಟ್ಟಾದಲ್ಲಿ ವಾಸವಾಗಿದ್ದರು.

ಗ್ರಾನೈಟ್ ಕಲ್ಲುಗಳನ್ನು ಆಟೋಗೆ ತುಂಬುತ್ತಿದ್ದ ವೇಳೆಯಲ್ಲಿ ದುರ್ಘಟನೆ ನಡೆದಿದೆ. ಗ್ರಾನೈಟ್ ಕಲ್ಲಿಗೆ ಹಗ್ಗ ಬಿಗಿಯುವಾಗ ತಲೆಯ ಮೇಲೆ ಗ್ರಾನೈಟ್ ಬಿದ್ದು ಸಾವನ್ನಪ್ಪಿದ್ದಾರೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read