ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಪುತ್ರ ಝೀಶಾನ್ ಸಿದ್ದಿಕಿ ಅಜಿತ್ ಪವಾರ್ ಅವರ ಎನ್ಸಿಪಿ ಪಕ್ಷಕ್ಕೆ ಸೇರಿದ್ದಾರೆ. ಆಗಸ್ಟ್ ನಲ್ಲಿ ಅವರನ್ನು ಕಾಂಗ್ರೆಸ್ ನಿಂದ ಹೊರಹಾಕಲಾಗಿತ್ತು.
ಇತ್ತೀಚೆಗೆ ಗುಂಡೇಟಿನಿಂದ ಹತ್ಯೆಗೀಡಾಗಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಪುತ್ರ ಝೀಶಾನ್ ಸಿದ್ದಿಕಿ ಎನ್ಸಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಆಗಸ್ಟ್ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಿದ್ದೀಕ್ ಅವರನ್ನು ಕಾಂಗ್ರೆಸ್ನಿಂದ ಉಚ್ಛಾಟಿಸಲಾಗಿತ್ತು. ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.ಮುಂಬರುವ ವಿಧಾನಸಭಾ ಚುನಾವಣೆಗೆ ಬಾಂದ್ರಾ ಪೂರ್ವ ಕ್ಷೇತ್ರದಿಂದ ಝೀಶಾನ್ ಸಿದ್ದಿಕಿ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಎನ್ಸಿಪಿ ತಕ್ಷಣ ಘೋಷಿಸಿತು. ಅವರು ಈ ಬಾರಿ ಈ ಸ್ಥಾನದಿಂದ ಶಿವಸೇನೆ ಯುಬಿಟಿಯ ವರುಣ್ ಸರ್ದೇಸಾಯಿ ಅವರನ್ನು ಎದುರಿಸಲಿದ್ದಾರೆ.
#WATCH | Maharashtra: Son of late NCP leader Baba Siddique, former Mumbai Youth Congress president Zeeshan Siddiqui joins the NCP in Mumbai.
NCP announces Zeeshan Siddiqui as party candidate from Bandra East Constituency for #MaharashtraElection2024 pic.twitter.com/EgjoHht4Lx
— ANI (@ANI) October 25, 2024