BREAKING : ಚಿಕ್ಕಮಗಳೂರಲ್ಲಿ ಪಟಾಕಿ ಸಿಡಿದು ದುರಂತ : ಓರ್ವ ಸಾವು, ಹಲವರಿಗೆ ಗಾಯ

ಚಿಕ್ಕಮಗಳೂರು : ಪಟಾಕಿ ಸಿಡಿದು ಓರ್ವ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.

ಮೃತನನ್ನು 30 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಪಟಾಕಿ ಸಿಡಿದ ರಭಸಕ್ಕೆ ಈತ 5 ಅಡಿ ಹಾರಿ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕ ಹಾಗೂ ಮೂವರು ಮಕ್ಕಳು ಕೂಡ ಗಾಯಗೊಂಡಿದ್ದಾರೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರದೀಪ್ ಮನೆಯ ಚೇರ್ ಕೆಳಗಡೆ ಪಟಾಕಿ ಬ್ಯಾಗ್ ತಂದಿಟ್ಟಿದ್ದರು. ಈ ವೇಳೆ ಹೊರಗಡೆಯಿಂದ ಬಂದ ಪಟಾಕಿಯ ಕಿಡಿಯೊಂದು ಬ್ಯಾಗ್ ಗೆ ತಗುಲಿ ಇಡೀ ಬ್ಯಾಗ್ ನಲ್ಲಿದ್ದ ಪಟಾಕಿಗಳು ಸ್ಪೋಟಗೊಂಡಿದೆ. ಪರಿಣಾಮ ಮನೆಯ ಗಾಜು ಪುಡಿ ಪುಡಿಯಾಗಿದೆ ಎಂದು ತಿಳಿದು ಬಂದಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read