BREAKING : ಬೆಂಗಳೂರಲ್ಲಿ ಮತ್ತೊಂದು ಅವಘಡ : ‘BESCOM’ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಲೈನ್ ಮ್ಯಾನ್ ಸಾವು

ಬೆಂಗಳೂರು : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಲೈನ್ ಮ್ಯಾನ್ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತರನ್ನು ಲೈನ್ ಮ್ಯಾನ್ ಸಿದ್ದರಾಜು(32) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಪೂರ್ವ ತಾಲೂಕಿನ ಚೀಮಸಂದ್ರ ಬಳಿಯಲ್ಲಿ ಪ್ಯೂಸ್ ಬದಲಾಯಿಸಲು ಕಂಬ ಹತ್ತಿದ್ದರು. ಕಂಬ ಹತ್ತುವ ಮುನ್ನ ಸಿದ್ದರಾಜು ಕರೆಂಟ್ ಕನೆಕ್ಷನ್ ತೆಗೆಯೋಕೆ ಹೇಳಿದ್ದರು. ಆದರೆ ಬೆಸ್ಕಾಂ ಸಿಬ್ಬಂದಿಗಳು ಅಜಾಗರೂಕತೆಯಿಂದ ಬೇರೆ ಲೈನ್ ಕರೆಂಟ್ ತೆಗೆದಿದ್ದಾರೆ.

ಪ್ಯೂಸ್ ದುರಸ್ಥಿಗಾಗಿ ವಿದ್ಯುತ್ ಕಂಬ ಏರಿದ ಸಿದ್ದರಾಜು ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ ಸಾರ್ವುಜನಿಕರು, ಕುಟುಂಬಸ್ಥರು ಬೆಸ್ಕಾಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read