BREAKING: 3.5 ಕೆಜಿ ಚಿನ್ನ ದರೋಡೆ: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಅರೆಸ್ಟ್

ದರೋಡೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನನ್ನು ಆಂಧ್ರಪ್ರದೇಶದ ವಿಕೋಟ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆ ಕೆಜಿಎಫ್ ನಗರಸಭೆಯ ಕಾಂಗ್ರೆಸ್ ಸದಸ್ಯ ಜಯಪಾಲ್ ನನ್ನು ಬಂಧಿಸಲಾಗಿದೆ. ಚಿನ್ನದ ವ್ಯಾಪಾರಿಯ ಕಾರ್ ಅಡ್ಡಗಟ್ಟಿ 3.5 ಕೆಜಿ ಚಿನ್ನವನ್ನು ಗ್ಯಾಂಗ್ ದೋಚಿತ್ತು. ಏಪ್ರಿಲ್ 2ರಂದು ನಾಯಕನೇರು ಸಮೀಪ ದರೋಡೆ ನಡೆಸಲಾಗಿತ್ತು.

ತಮಿಳುನಾಡಿನ ಚೆನ್ನೈನಿಂದ ಕೆಜಿಎಫ್ ಗೆ ವ್ಯಾಪಾರಿ ಚೇತನ್ ಜೈನ್ ಚಿನ್ನ ಸಾಗಿಸುತ್ತಿದ್ದರು. ಅವರ ಕಾರ್  ಅಡ್ಡಗಟ್ಟಿದ ಜಯಪಾಲ್ ಮತ್ತು ಸಂಗಡಿಗರು ದರೋಡೆ ನಡೆಸಿದ್ದರು.

ಕೆಜಿಎಫ್ ನಿವಾಸಿ ಜಯಪಾಲ್, ಕಾರ್ ಚಾಲಕ ಮುಕ್ರಂ ಪಾಷಾ, ತಮಿಳುನಾಡಿನ ಇಬ್ಬರು ಕಾರ್ ಅಡ್ಡಗಟ್ಟಿ ದರೋಡೆ ಮಾಡಿದ್ದರು. ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರ್ ವಶಕ್ಕೆ ಪಡೆದ ವಿಕೋಟ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read