ಬೆಂಗಳೂರು : ರಾಜ್ಯದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದಿನಿಂದ ‘ಅನ್ನಭಾಗ್ಯ’ ಆಹಾರ ಧಾನ್ಯ ಸಾಗಾಣಿಕೆ ಬಂದ್ ಆಗಲಿದೆ.
ಹೌದು, ಆಹಾರ ಧಾನ್ಯ ಸಾಗಾಣಿಕೆ ವೆಚ್ಚ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ 15 ದಿನಗಳ ಕಾಲ ಗಡುವು ನೀಡಲಾಗಿತ್ತು. ಯಾವುದೇ ಭರವಸೆ ಈಡೇರಿಸಿದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಸಾಗಾಣಿಕೆ ಬಂದ್ ಮಾಡಲಾಗಿದೆ ಎಂದು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಷಣ್ಮುಖಪ್ಪ ಹೇಳಿದ್ದಾರೆ.
ಹಣ ರಿಲೀಸ್ ಮಾಡದ ಸರ್ಕಾರದ ವಿರುದ್ಧ ಪಡಿತರ ಆಹಾರ ಧಾನ್ಯಗಳ ಸಗಟು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘ ತೀವು ಆಕ್ರೋಶ ವ್ಯಕ್ತಪಡಿಸಿದೆ. ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣೆ ಬಂದ್ ಮಾಡುವಂತೆ ಷಣ್ಮುಖಪ್ಪ ಕರೆ ನೀಡಿದ್ದಾರೆ. ಬಾಕಿ ಹಣ ಕೊಡುವುದಾಗಿ ಸರ್ಕಾರ ಬರೀ ಭರವಸೆ ನೀಡಿದೆ, ಆದರೆ ಹಣ ಕೊಟ್ಟಿಲ್ಲ ಕಳೆದ ನಾಲ್ಕು ತಿಂಗಳ ಬಾಕಿ ಹಣ ನಮಗೆ ಬರಬೇಕಿದೆ ಎಂದು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಷಣ್ಮುಖಪ್ಪ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ