ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಇಂದು ಪಿಐಎಲ್ (PIL) ವಿಚಾರಣೆ ನಡೆದಿದೆ.
ಘಟನೆ ಸಂಬಂಧ RCB, KSCA, DNA ಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ವಿಚಾರಣೆ ಜೂ.23 ಕ್ಕೆ ಮಂದೂಡಿದೆ. ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಿದೆ. ಸರ್ಕಾರದ ವಾದ ಕೇಳಿದ ಬಳಿಕ ಮುಚ್ಚಿದ ಲಕೋಟೆ ಬಗ್ಗೆ ಹೈಕೋರ್ಟ್ ತೀರ್ಮಾನ ಕೈಗೊಳ್ಳಲಿದೆ. ವಿಚಾರಣೆಯನ್ನ ಜೂ.23 ಕ್ಕೆ ಮಂದೂಡಿದೆ.
ಘಟನೆ ಕುರಿತಂತೆ ಹೈಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಸರಿಯಾದ ತನಿಖೆ ನಡೆಸಬೇಕು ಅಲ್ಲದೇ ಸರಿಯಾದ ಪರಿಹಾರ ಕೊಡಬೇಕೆಂದು ಹೊಸ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗಾಗಿ ಪ್ರತಿವಾದಿಗಳನ್ನಾಗಿ RCB, KSCA, DNA ಗೆ ಹೈಕೋರ್ಟ್ ಸೂಚನೆ ನೀಡಿದೆ.
You Might Also Like
TAGGED:ಕಾಲ್ತುಳಿತ ದುರಂತ