BREAKING: ಕೆಲಸ ಮಾಡದೇ ಸತಾಯಿಸಿ ಮುಂಗಡ ಹಣ ಕೊಟ್ಟ ಮಾಲೀಕನನ್ನೇ ಹತ್ಯೆಗೈದ ತಂದೆ, ಮಗ ಅರೆಸ್ಟ್

ಬೆಂಗಳೂರು: ಅಡ್ವಾನ್ಸ್ ಹಣ ಕೊಟ್ಟಿದ್ದ ಮಾಲೀಕನನ್ನೇ ತಂದೆ, ಮಗ ಹತ್ಯೆ ಮಾಡಿದ ಘಟನೆ ಕಡಬಗೆರೆ ಕ್ರಾಸ್ ಆರ್.ಆರ್. ಇಂಡಸ್ಟ್ರೀಸ್ ನಲ್ಲಿ ನಡೆದಿದೆ.

ರಮೇಶ್ ಎಂಬುವರನ್ನು ಕೊಲೆ ಮಾಡಲಾಗಿದೆ. ಸೈಯದ್ ತಾಜುದ್ದೀನ್(50) ಮತ್ತು ಸೈಯದ್ ಅಯೂಬ್ ಅವರನ್ನು ಬಂಧಿಸಲಾಗಿದೆ. ರಮೇಶ್ ಬಳಿ 6 ಲಕ್ಷ ರೂ. ಮುಂಗಡ ಪಡೆದಿದ್ದ ಇಬ್ಬರೂ ಸರಿಯಾಗಿ ಕೆಲಸಕ್ಕೆ ಬಾರದೆ ಸತಾಯಿಸುತ್ತಿದ್ದರು. ಇಬ್ಬರೂ ಕೂಡ ಕೆಲಸ ಮಾಡದೆ ರಮೇಶನಿಗೆ ಬೆದರಿಕೆ ಹಾಕಿದ್ದರು. ಇಂದು ಮಧ್ಯಾಹ್ನ ಮಾಲೀಕ ರಮೇಶ್ ಜೊತೆಗೆ ಜಗಳವಾಗಿ ಗಲಾಟೆಯಾಗಿದೆ. ಈ ವೇಳೆ ಮಾರಕಾಸ್ತ್ರಗಳಿಂದ ತಂದೆ, ಮಗ ರಮೇಶ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read