BREAKING: ಕಸ ಬಿಸಾಕುವ ವೇಳೆ ಕರೆಂಟ್ ಶಾಕ್; ಬಾಲಕ ಸ್ಥಳದಲ್ಲೇ ದುರ್ಮರಣ

ಬಾಗಲಕೋಟೆ: ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ನಾಲಬಂದ ಫಂಕ್ಷನ್ ಹಾಲ್ ಬಳಿ ನಡೆದಿದೆ.

ರಾಕೇಶ್ ಕೊರವರ (12) ಮೃತ ಬಾಲಕ. ಕಸ ಚೆಲ್ಲುವ ವೇಳೆ ಕಬ್ಬಿಣದ ಗ್ರಿಲ್ ತಾಗಿದ್ದು, ಕರೆಂಟ್ ಪ್ರವಹಿಸಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕರೆಂಟ್ ಕಂಬದಿಂದ ಗ್ರಿಲ್ ಗೆ ತಂತಿ ಕಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿದೆ.

ನಾಲಬಂಧ ಫಂಕ್ಷನ್ ಹಾಲ್ ಮಾಲೀಕನ ವಿರುದ್ಧ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read