ದಲಿತ ನಾಯಕನ ಭೇಟಿ ನಂತರ ದೇವಸ್ಥಾನ ‘ಶುದ್ಧೀಕರಣ’ ಮಾಡಿದ ಬಿಜೆಪಿ ಮಾಜಿ ಶಾಸಕ ಅಮಾನತು

ಜೈಪುರ: ರಾಜಸ್ಥಾನದ ಭಾರತೀಯ ಜನತಾ ಪಕ್ಷ ಮಾಜಿ ಶಾಸಕ ಜ್ಞಾನದೇವ್ ಅಹುಜಾ ಅವರನ್ನು ಅಮಾನತುಗೊಳಿಸಲಾಗಿದೆ.

ಅಲ್ವಾರ್‌ ನಲ್ಲಿ ದಲಿತ ಕಾಂಗ್ರೆಸ್ ನಾಯಕ ಟಿಕಾರಾಮ್ ಜಲ್ಲಿ ಅವರು ಭೇಟಿಯಾಗಿ ‘ಅಶುದ್ಧಗೊಳಿಸಿದ್ದಾರೆ’ ಎಂದು ಆರೋಪಿಸಿ ದೇವಾಲಯಕ್ಕೆ ‘ಗಂಗಾಜಲ’ ಸಿಂಪಡಿಸಿದ ಅಹುಜಾ ಅವರ ವಿವಾದಾತ್ಮಕ ನಡೆ ನಂತರ ಶೋಕಾಸ್ ನೋಟಿಸ್ ನೀಡಲಾಗಿದೆ.

ರಾಮನವಮಿಯಂದು ದೇವಾಲಯದ ಪವಿತ್ರೀಕರಣ ಸಮಾರಂಭದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದು ದೇವಾಲಯವನ್ನು “ಕಲುಷಿತಗೊಳಿಸುತ್ತದೆ” ಎಂದು ಹೇಳಿದ ಅಹುಜಾ ಮರುದಿನ ಗಂಗಾಜಲ ಸಿಂಪಡಿಸುವ ಮೂಲಕ ಮತ್ತು ಪ್ರಾರ್ಥನೆ ನಡೆಸುವ ಮೂಲಕ ‘ಶುದ್ಧೀಕರಣ’ ಆಚರಣೆಯನ್ನು ಮಾಡಿದರು. ಈ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬಿಜೆಪಿ ನಾಯಕತ್ವವು ಹಾನಿಯನ್ನು ತಗ್ಗಿಸಲು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ಅಹುಜಾಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಒತ್ತಾಯಿಸಿ ಶೋಕಾಸ್ ನೋಟಿಸ್ ನೀಡಲಾಯಿತು. ಅಹುಜಾ ವಿರುದ್ಧ ಜಾತಿ ಆಧಾರಿತ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಅವರು ಪ್ರತಿಕ್ರಿಯಿಸಲು ವಿಫಲವಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಜಾತಿ, ಲಿಂಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ನೀತಿ ಸಂಹಿತೆಗೆ ಪಕ್ಷವು ತನ್ನ ಬದ್ಧತೆಯನ್ನು ಒತ್ತಿ ಹೇಳಿದೆ.

ಅಹುಜಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ಬಗ್ಗೆ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಪ್ರತಿಕ್ರಿಯೆ ನೀಡಿದ್ದು, ನಾವು ತಕ್ಷಣ ಕ್ರಮ ಕೈಗೊಂಡು ಪ್ರತಿಕ್ರಿಯೆ ಕೇಳಿದ್ದೇವೆ ಎಂದರು.

ಅಹುಜಾ ಅವರ ಕೃತ್ಯಗಳಿಗೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಪಕ್ಷವು ಈ ಘಟನೆಯನ್ನು ಜಾತಿ ತಾರತಮ್ಯದ ಸ್ಪಷ್ಟ ಕೃತ್ಯವೆಂದು ಖಂಡಿಸಿದೆ.

ಬಿಜೆಪಿಯು ದಲಿತರ ಬಗ್ಗೆ ದ್ವೇಷವನ್ನು ಬೆಳೆಸುತ್ತಿದೆ ಎಂದು ಟಿಕರಾಮ್ ಜಲ್ಲಿ ಆರೋಪಿಸಿದರು, ಅಶೋಕ್ ಗೆಹ್ಲೋಟ್ ಮತ್ತು ಜೈರಾಮ್ ರಮೇಶ್ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಅಹುಜಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read