ಕರಾವಳಿಯಲ್ಲಿ ನಾವು ಗೆದ್ದಿಲ್ಲ ಎಂದ ಮಾತ್ರಕ್ಕೆ ಪಕ್ಷ ವೀಕ್ ಆಗಿದೆ ಎಂದರ್ಥವಲ್ಲ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ 8 ಜಿಲ್ಲೆಯಲ್ಲಿ ಶಾಸಕರೇ ಇಲ್ಲ: ಸಿಎಂ

ಮಂಗಳೂರು: ಕರಾವಳಿಯಲ್ಲಿ ನಾವು ಗೆದ್ದಿಲ್ಲ ಅಂದ ಮಾತ್ರಕ್ಕೆ ಪಕ್ಷ ವೀಕ್ ಆಗಿದೆ ಎಂದು ಅರ್ಥವಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಶೇಕಡ 42.6ರಷ್ಟು ಮತ ಪಡೆದಿದ್ದೇವೆ. ಬಿಜೆಪಿ ಶೇಕಡ 30ರಷ್ಟು ಮತ ಪಡೆದಿದೆ. 8 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಇದೆ. ಹಾಗೆಂದು ಅದು ವೀಕ್ ಆಗಿದೆ ಎನ್ನಲು ಆಗುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಕೆಲವು ಜಿಲ್ಲೆಗಳಲ್ಲಿ ಶಾಸಕರೇ ಇಲ್ಲ. 125 ಇದ್ದವರು 66ಕ್ಕೆ ಇಳಿದಿದ್ದಾರೆ. ಯಾರು ವೀಕ್? ಯಾರು ಸ್ಟ್ರಾಂಗ್? ಎಂದು ಪ್ರಶ್ನಿಸಿದ್ದಾರೆ.

ಒಂದೆರಡು ಕ್ಷೇತ್ರ ಇಟ್ಟುಕೊಂಡು ಹಾಗೆಲ್ಲ ಹೇಳಲು ಆಗುವುದಿಲ್ಲ ಎಂದು ಕರಾವಳಿ ಭಾಗದಲ್ಲಿ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read