BIGG NEWS : ಸನಾತನ ಧರ್ಮ ಶುದ್ಧೀಕರಣ ಆಗಬೇಕು : ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡ ಹೆಚ್.ಸಿ.ಮಹದೇವಪ್ಪ

ದಾವಣಗೆರೆ : ಸನಾತನ ಧರ್ಮದ ಕುರಿತಂತೆ ಉದಯನಿಧಿ ಹೇಳಿಕೆಯನ್ನು ಸಚಿವ ಹೆಚ್.ಸಿ. ಮಹದೇವಪ್ಪ ಸಮರ್ಥಿಸಿಕೊಂಡಿದ್ದು, ಸನಾತನ ಧರ್ಮ ಶುದ್ಧೀಕರಣ ಆಗಬೇಕೆಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನದಲ್ಲಿ ಶೂದ್ರರರಿಗೆ ಓದೋದನ್ನ ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ಮೇಲೆ ಎಲ್ಲರೂ ವ್ಯಾಪಕ ವಿದ್ಯ ಕಲಿತರು. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲಿಷ್ ಓದತ್ತಾ ಇದ್ದರು. ಅದಕ್ಕೆ ಅಂಬೇಡ್ಕರ್ ಮನುವಾದವನ್ನ ಸುಟ್ಟು ಹಾಕಿದರು. ಯಾವ ಧರ್ಮವೂ ಮೇಲಲ್ಲ ಎಲ್ಲವೂ ಸಂವಿಧಾನದ ಒಳಗೆ ಬರುತ್ತದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಅನ್ನೋ ಉದ್ದೇಶದ್ದಿಂದ ನಾವು ಸಂವಿಧಾನ ಪೀಠಿಕೆ ಜಾಹೀರಾತು ನೀಡಿದ್ದೇವೆ ಎಂದರು.

ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ?ಕಾಂಗ್ರೆಸ್ ಸರ್ಕಾರದ ಯೋಜನೆ 1.32 ಕೋಟಿ ಬಡವರಿಗೆ ತಲುಪುತ್ತಿದೆ. ಇದರಿಂದ ಬಡವರು ಆರ್ಥಿಕವಾಗಿ ಸಬಲೀಕರಣ ಆಗುತ್ತಿದ್ದಾರೆ. ಬಿಜೆಪಿಯವರು ಸುಮ್ಮನೇ ಭಾವನಾತ್ಮಕವಾಗಿ ಮಾತನಾಡುತ್ತಾರೆ ಅಷ್ಟೇ. ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡೋದು ಗೊತ್ತಿಲ್ಲ . ನಮ್ಮ ಸರ್ಕಾರ ಬಡವರ ಪರವಾಗಿದೆ  ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read