BIG NEWS: ಮಾವಿನ ಮರದಲ್ಲಿ ಹಣ್ಣಿನ ಬದಲಾಗಿ 1 ಕೋಟಿ ಹಣ ಪತ್ತೆ; ಐಟಿ ಅಧಿಕಾರಿಗಳೇ ಶಾಕ್

ಮೈಸೂರು: ಮೈಸೂರಿನಲ್ಲಿ ಐಟಿ ಅಧಿಕಾರಗಳು ಮುಂಜಾನೆಯಿಂದಲೇ ಹಲವೆಡೆ ದಾಳಿ ನಡೆಸಿದ್ದು, ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆ ಮೇಲೆ ನಡೆದ ದಾಳಿಯಲ್ಲಿ ಮಾವಿನ ಮರದಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದೆ.

ಸುಬ್ರಹ್ಮಣ್ಯ ರೈ ಅವರ ಮನೆಯ ಅಂಗಳದಲ್ಲಿದ್ದ ಮಾವಿನ ಮರದಲ್ಲಿ ಮಾವಿನ ಹಣ್ಣಿನ ಬಾಕ್ಸ್ ನಲ್ಲಿ ಕಂತೆ ಕಂತೆ ಹಣವನ್ನು ಇಡಲಾಗಿತ್ತು. ಬಾಕ್ಸ್ ನೋಡಿದ ಐಟಿ ಅಧಿಕಾರಿಗಳು ಅನುಮಾನಗೊಂಡು ಕೆಳಗಿಳಿಸಿದ್ದಾರೆ. ಬಾಕ್ಸ್ ನಲ್ಲಿ ಮಾವಿನ ಹಣ್ಣಿನ ಬದಲಾಗಿ ಸುಮಾರು 1 ಕೋಟಿಯಷ್ಟು ಹಣ ಪತ್ತೆಯಾಗಿದೆ.

ಕೆ. ಸುಬ್ರಹ್ಮಣ್ಯ ರೈ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಅವರ ಸಹೋದರ ಎಂದು ಹೇಳಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read