BIG NEWS: ಮಾಜಿ ಸಚಿವ ಸುಧಾಕರ್ ಆರೋಪಕ್ಕೆ ಹೆಚ್. ವಿಶ್ವನಾಥ್ ತಿರುಗೇಟು

ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ್ದ ಮಾಜಿ ಸಚಿವ ಡಾ.ಕೆ. ಸುಧಾಕರ್ ಆರೋಪಕ್ಕೆ ಹೆಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಸುಧಾಕರ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸುಧಾಕರ್ ಈ ಆರೋಪ ಮಾಡಿದ್ದರೆ ಒಂದು ಅರ್ಥವಿರುತ್ತಿತ್ತು. ಈಗ ಸೋತು ಸುಣ್ಣವಾದ ಮೇಲೆ ಈ ರೀತಿ ಹೇಳುತ್ತಿರುವುದು ನಗೆಪಾಟಲು. ಸಚಿವ ಡಾ.ಕೆ. ಸುಧಾಕರ್ ಅವರನ್ನು ದುಡ್ಡು ಇಲ್ಲದ ಒಬ್ಬ ಯುವಕ ಸೋಲಿಸಿದ್ದಾನೆ. ಮಾಜಿ ಸಚಿವ ಸುಧಾಕರ್ ಜೊತೆ ಬಿಜೆಪಿ ಸರ್ವನಾಶದತ್ತ ತೆರಳಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಪ್ರೇರಣೆ ಇದ್ದರೇ ಅಂದೆ ಸುಧಾಕರ್ ಹೇಳಬಹುದಿತ್ತು. ಈಗ ಸೋತು ಸುಣ್ಣವಾದ ಮೇಲೆ ಆರೋಪ ಮಾಡುತ್ತಿರುವುದು ನಗು ತರಿಸುತ್ತಿದೆ ಎಂದು ಟೀಕಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read