BIG NEWS: ನನ್ನ ಹೆಂಡ್ತಿಗೂ ಫ್ರೀ, ಶೋಭಕ್ಕ ನಿನಗೂ ಫ್ರೀ ಎಂದವರು ಈಗೇಕೆ ಷರತ್ತು ಹಾಕುತ್ತಿದ್ದೀರಿ ? ಮಾಜಿ ಸಚಿವ ಅಶ್ವತ್ಥನಾರಾಯಣ ಕಿಡಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಗೆ ಈಗ ಷರತ್ತು ಹಾಕುತ್ತಿರುವುದೇಕೆ ? ಎಲ್ಲರಿಗೂ ಉಚಿತ ಎಂದು ಘೋಷೀಸಿದವರು ಈಗ ಕೊಡಲಿ ಬಿಡಿ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ಇದು ಲಾಟರಿ ಸರ್ಕಾರ, ಲಾಟರಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಬಿಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಗೂ ಮುನ್ನ ಗ್ಯಾರಂಟಿ ಭರವಸೆಗಳನ್ನು ನೀಡಿ ಎಲ್ಲರಿಗೂ ಫ್ರೀ ಫ್ರೀ ಎಂದು ಘೋಷಿಸಿದರು. ನನ್ನ ಹೆಂಡತಿಗೂ ಫ್ರೀ ಅಂತ ಸಿದ್ದರಾಮಯ್ಯನವರು ಹೇಳಿದ್ರು. ಶೋಭಕ್ಕ ನಿನಗೂ ಫ್ರೀ, ಸಿ.ಟಿ. ರವಿ ನಿನಗೂ ಫ್ರೀ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ರು. ಎಲ್ಲರಿಗೂ ಉಚಿತ ಎಂದವರು ಈಗ ಷರತ್ತುಗಳನ್ನು ಯಾಕೆ ಹಾಕುತ್ತಿದ್ದಾರೆ? ಎಲ್ಲರಿಗೂ ಉಚಿತ ಯೋಜನೆ ಕೊಡಲಿ ಎಂದು ಗುಡುಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read