BIG NEWS: ಕುಡಿದ ಮತ್ತಿನಲ್ಲಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕರಿಬ್ಬರು ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯ ಪಣತ್ತೂರಿನಲ್ಲಿ ನಡೆದಿದೆ.

ಬಸವರಾಜು ಹಲ್ಲೆಗೊಳಗಾದ ವೈದ್ಯ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ಹರೀಶ್ ಹಾಗೂ ರಾಜೇಶ್ ಎಂಬುವವರು ಆಸ್ಪತ್ರೆಗೆ ಬಂದಿದ್ದರು. ಬಾಟಲ್ ನಿಂದ ಹೊಡೆದು ಹರೀಶ್ ಎಂಬುವವರ ಕೈಗೆ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ 1,300 ರೂಪಾಯಿ ಬಿಲ್ ನ್ನು ಸಿಬ್ಬಂದಿಗಳು ನೀಡಿದ್ದರು. ಇದಕ್ಕೆ ಬಿಲ್ ಜಾಸ್ತಿಯಾಗಿದೆ ಎಂದು ಇಬ್ಬರೂ ಕ್ಯಾತೆ ತೆಗೆದಿದ್ದರು.

ಬಳಿಕ ವೈದ್ಯ ಬಸವರಾಜ್ ಶೇ.10ರಷ್ಟು ಡಿಸ್ಕೌಂಟ್ ನೀಡಲು ಸೂಚಿಸಿದ್ದರು. ಈ ವೇಳೆ ಮತ್ತೆ ಗಲಾಟೆ ಮಾಡಿ ವೈದ್ಯರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂಬ ಆರೊಪ ಕೇಳಿಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read