BIG NEWS: ಒಳ್ಳೆಯ ಕೆಲಸ ವಿರೋಧಿಸುವ ಎಡಬಿಡಂಗಿಗಳೂ ಇದ್ದಾರೆ; ವಿಪಕ್ಷಗಳ ವಿರುದ್ಧ ಬಿ.ಎಲ್ ಸಂತೋಷ್ ವಾಗ್ದಾಳಿ

ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಒಳ್ಳೆಯ ಕೆಲಸ ಮಾಡಿದಾಗ ಅದನ್ನು ವಿರೋಧಿಸುವ ಎಡಬಿಡಂಗಿಗಳು ಇರುತ್ತಾರೆ ಎಂದು ಗುಡುಗಿದ್ದಾರೆ.

ಮೈಸೂರಿನ ಸುತ್ತೂರು ಜಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಲ್.ಸಂತೊಷ್, ಏನೇ ಒಳ್ಳೆಯದನ್ನು ಮಾಡಿದಾಗಲೂ ಅದನ್ನು ವಿರೋಧಿಸಿವ ಎಡಬಿಡಂಗಿಗಳು ಎಲ್ಲಾ ಕಡೆಯೂ ಇರುತ್ತಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಗೋಲಿಬಾರ್ ನಡೆಯಲಿಲ್ಲ. ಕೋವಿಡ್ ಸ್ಥಿತಿ ಬಗ್ಗೆ ಜನ ಬೇಸರಗೊಂಡರು ಹೊರತು ಸರ್ಕಾರದ ಬಗ್ಗೆ ಯಾರೂ ಬೇಸರಿಸಲಿಲ್ಲ. 7 ಲಕ್ಷದ 80 ಸಾವಿರ ಜನ ವಿದೇಶದಿಂದ ಮರಳಿ ಭಾರತಕ್ಕೆ ಬಂದರು. ಕೆಲವರು ಕೊಂಕು ಮಾತಾಡಿದರೂ ಅವರು ತಲೆ ಕೆಡಿಸಿಕೊಂಡಿಲ್ಲ. ಕಾರಣ ಜನರಿಗೆ ಕೊರೊನಾ ಸಂದರ್ಭದ ಪರಿಸ್ಥಿತಿ ಅರಿವಿತ್ತು ಎಂದು ಹೇಳಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read