BIG NEWS: ಎಸ್.ಆರ್.ಶ್ರೀನಿವಾಸ್ ಪಕ್ಷ ಸೇರ್ಪಡೆ ಬೆನ್ನಲ್ಲೇ ಗುಬ್ಬಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ; ಮುಂದೆ ಏನಾಗುತ್ತೆ ಕಾದು ನೋಡಿ ಎಂದು ಎಚ್ಚರಿಕೆ

ತುಮಕೂರು: ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಗುಬ್ಬಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಗುಬ್ಬಿ ಮೂಲ ಕಾಂಗ್ರೆಸ್ಸಿಗರು ಶ್ರೀನಿವಾಸ್ ವಿರುದ್ಧ ಸಿಡಿದೆದ್ದಿದ್ದಾರೆ.

ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕ್ಷೇತ್ರದ ಮುಖಂಡರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಈವರೆಗೂ ನಮ್ಮೊಂದಿಗೆ ಸಮಾಲೋಚನೆ ಮಾಡಿಲ್ಲ. ಮುಂದೆ ಏನಾಗುತ್ತೆ ಎಂದು ಕಾದು ನೋಡಿ ಎಂದು ಕೈ ಮುಖಂಡ ಹೊನ್ನಗಿರಿಗೌಡ ಎಚ್ಚರಿಕೆ ನೀಡಿದ್ದಾರೆ.

ದುಡ್ಡು ಸುರಿದು ಖರ್ಚು ಮಾಡುವಾಗ ನಾವು ಬೇಕು. ಈಗ ಟಿಕೆಟ್ ಕೊಡಬೇಕು ಅಂದಾಗ ನಾವು ಬೇಡ್ವಾ? ಮಾಜಿ ಶಾಸಕ ರಾಜಣ್ಣ ಅವರೇ ಇದಕ್ಕೆಲ್ಲ ಸೂತ್ರಧಾರರು. ಮುಂದೆ ಕೆ.ಎನ್.ರಾಜಣ್ಣ ಅವರಿಗೂ ದೇವರು ಪಾಠ ಕಲಿಸುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read