ಭರತ್ ಪುರ: ರಾಜಸ್ಥಾನದ ಭರತ್ ಪುರದಲ್ಲಿ ಭಾನುವಾರ ಚಂಬಲ್ ಕುಡಿಯುವ ನೀರಿನ ಯೋಜನೆಯಡಿ ಕೆಲಸ ನಡೆಯುತ್ತಿರುವ ಮಣ್ಣಿನ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸ್ಥಳವು ಗೆಹಂಡೋಲಿ ಮೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗಿ ಕಾ ನಾಗ್ಲಾ ಮತ್ತು ದೌಲತ್ಗಢ ಗ್ರಾಮದ ನಡುವೆ ಇದೆ.
ಜಂಗಿ ಕಾ ನಾಗ್ಲಾ, ಉಟ್ಟು ಮತ್ತು ಇತರ ಗ್ರಾಮಗಳ ಗ್ರಾಮಸ್ಥರು ಸ್ಥಳದಲ್ಲಿ ಅಗೆಯಲಾಗುತ್ತಿದ್ದ ಮಣ್ಣನ್ನು ತೆಗೆದುಕೊಳ್ಳಲು ಹೋಗಿದ್ದರು ಎಂದು ಉಚ್ಚೈನ್ ವೃತ್ತ ಅಧಿಕಾರಿ ಅನಿಲ್ ಡೋರಿಯಾ ಹೇಳಿದರು.

ಪೊಲೀಸರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮಹಿಳೆಯರು ಸೇರಿದಂತೆ ಸುಮಾರು 7 ಗ್ರಾಮಸ್ಥರು ಸಿಲುಕಿಕೊಂಡಿದ್ದರು. ರಕ್ಷಿಸಲ್ಪಟ್ಟವರನ್ನು ಜಿಲ್ಲಾ ರಾಜ್ ಬಹದ್ದೂರ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಫತೇಪುರ್ ಸಿಕ್ರಿ ವ್ಯಾಪ್ತಿಯ ಉಟ್ಟು ಗ್ರಾಮದ ಅನುಕುಲ್ ಕುಮಾರ್(24), ವಿಮಲಾ ದೇವಿ(44), ಯೋಗೇಶ್ ಕುಮಾರಿ(25) ಮತ್ತು ವಿನೋದ್ ದೇವಿ(55) ಎಂದು ಗುರುತಿಸಲಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಭರತ್ ಪುರ ಜಿಲ್ಲಾಧಿಕಾರಿ ಕಮರ್ ಉಲ್ ಜಮಾನ್ ಚೌಧರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.