ಬೆಂಗಳೂರು ರಸ್ತೆಯೊಂದು ರಾತ್ರೋರಾತ್ರಿ ದುರಸ್ತಿ ; ಇದರ ಹಿಂದಿನ ಕಾರಣ ತಿಳಿದ್ರೆ ಶಾಕ್‌ ಆಗ್ತೀರಾ !

ರಾಜಧಾನಿಯ ರಸ್ತೆಗಳ ಪಾಡು ಹೇಳತೀರದು. ಗುಂಡಿ, ಧೂಳು, ಜಲ್ಲಿಕಲ್ಲುಗಳಿಂದ ತುಂಬಿರುವ ರಸ್ತೆಗಳು ನಿತ್ಯ ಪ್ರಯಾಣಿಕರ ಪಾಲಿಗೆ ನರಕಯಾತನೆ. ಆದರೆ, ಇಲ್ಲೊಂದು ವಿಚಿತ್ರ ಬೆಳವಣಿಗೆ ನಡೆದಿದೆ. ಯಾವುದೋ ದೊಡ್ಡ ವ್ಯಕ್ತಿ ಬರ್ತಾರೆ ಅಂದಾಗ ದಿಢೀರ್ ಅಂತ ರಸ್ತೆಗಳು ಮಾಯಾಜಾಲದಂತೆ ದುರಸ್ತಿಯಾಗುತ್ತವೆ !

ಚಂದಾಪುರ-ಅನೇಕಲ್ ರಸ್ತೆಯ ನಿವಾಸಿಯೊಬ್ಬರು ತಮ್ಮ ಅಳಲನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವರ್ಷಗಳಿಂದ ನರಕ ತೋರಿಸುತ್ತಿದ್ದ ರಸ್ತೆ ಕಳೆದ ವಾರ ರಾತ್ರೋರಾತ್ರಿ ಹೊಸ ರೂಪ ಪಡೆದುಕೊಂಡಿತು. ಮೊದಲು ಖುಷಿಯಾದ ಆ ವ್ಯಕ್ತಿಗೆ, ತಮ್ಮ ಗೋಳು ಯಾರೋ ಕೇಳಿಸಿಕೊಂಡ್ರು ಅಂದ್ಕೊಂಡ್ರಂತೆ. ಆದರೆ, ಅಷ್ಟರಲ್ಲೇ ಅವರ ಸೊಸೈಟಿಯ ವಾಟ್ಸಾಪ್ ಗ್ರೂಪ್‌ಗೆ ಬಂದ ಒಂದು ಆಹ್ವಾನ ಪತ್ರಿಕೆ ಅಚ್ಚರಿ ಮೂಡಿಸಿತು. ಅದು ಸ್ಥಳೀಯ ಶಾಸಕರೊಬ್ಬರ ಮಗನ ಮದುವೆಯ ಆಮಂತ್ರಣ ಪತ್ರಿಕೆ.

ಇದನ್ನು ನೋಡಿದ ಆ ವ್ಯಕ್ತಿಗೆ ಆಶ್ಚರ್ಯವಾಗಿದ್ದು ಸಹಜ. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಅನೇಕ ಬೆಂಗಳೂರಿಗರು ತಮ್ಮದೇ ಆದ ಇಂತಹ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಆಡಳಿತದ ಬೇಜವಾಬ್ದಾರಿತನವನ್ನು ಹಿಗ್ಗಾಮುಗ್ಗ ಟೀಕಿಸುತ್ತಿದ್ದರೆ, ಇನ್ನು ಕೆಲವರು ಇಂತಹ ವಿಐಪಿ ಸಂಸ್ಕೃತಿಗೆ ಮಣೆ ಹಾಕುವ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಚಂದಾಪುರದ ಬಳಿಯ ಗ್ರಾಮದ ಹಿರಿಯರೊಬ್ಬರು ಕಳೆದ ೨೦ ವರ್ಷಗಳಿಂದ ತಮ್ಮ ಭಾಗದ ರಸ್ತೆ ದುರಸ್ತಿಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ರಾತ್ರಿ ವೇಳೆ ಆ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಈ ಘಟನೆ ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನಷ್ಟೇ ಅಲ್ಲದೆ, ವಿಐಪಿ ಸಂಸ್ಕೃತಿಗೆ ನೀಡಲಾಗುವ ಅನಗತ್ಯ ಆದ್ಯತೆಯನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯ ಜನರ ಕಷ್ಟಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read