SHOCKING NEWS: ಕರೆಂಟ್ ಶಾಕ್ ಗೆ ತುಂಡಾಗಿ ಬಿದ್ದ ಲೈನ್ ಮೆನ್ ರುಂಡ; ಕಂಬದಲ್ಲೇ ನೇತಾಡಿದ ದೇಹದ ಇನ್ನರ್ಧ ಭಾಗ


ಬಳ್ಳಾರಿ: ವಿದ್ಯುತ್ ಕಂಬ ಹತ್ತಿ ಲೈನ್ ದುರಸ್ತಿ ಮಾಡುತ್ತಿದ್ದಾಗ ದುರಂತ ಸಂಭವಿಸಿದ್ದು, ಕರೆಂಟ್ ಶಾಕ್ ಗೆ ಲೈನ್ ಮೆನ್ ನ ರುಂಡ-ಮುಂಡವೇ ಬೇರ್ಪಟ್ಟು ಬಿದ್ದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರಿನಲ್ಲಿ ಈ ಘಟನೆ ನಡೆದಿದೆ. ಲೈನ್ ಮೆನ್ ಭದ್ರ ಮೃತ ವ್ಯಕ್ತಿ. ಇಂದು ಮುಂಜಾನೆ ಕರೆಂಟ್ ಕಂಬ ಹತ್ತಿದಾಗ ಈ ದುರಂತ ಸಂಭವಿಸಿದೆ.

ಖಾಸಗಿಯಾಗಿ ಲೈನ್ ಮೆನ್ ಕರೆಂಟ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದ. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಕರೆಂಟ್ ಶಾಕ್ ಗೆ ಲೈನ್ ಮೆನ್ ರುಂಡವೇ ತುಂಡಾಗಿ ಕೆಳಗೆ ಬಿದ್ದಿದೆ. ಅರ್ಧ ದೇಹ ಕರೆಂಟ್ ಕಂಬದಲ್ಲಿಯೇ ನೇತಾಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read