BREAKING: ಡ್ಯೂಟಿ ಬದಲಿಸಿದ್ದಕ್ಕೆ ಪಿಸಿ ಆತ್ಮಹತ್ಯೆ ಹೈಡ್ರಾಮಾ: ಲೋ ಬಿಪಿಯಿಂದ ಆಸ್ಪತ್ರೆ ಸೇರಿದ ಪಿಐ

ಬೆಳಗಾವಿ: ಡ್ಯೂಟಿ ಬದಲಾವಣೆ ಮಾಡಿದ್ದಕ್ಕೆ ಠಾಣೆಯಲ್ಲಿ ಆತ್ಮಹತ್ಯೆ ಹೈಡ್ರಾಮ ನಡೆಸಲಾಗಿದೆ. ಬೆಳಗಾವಿಯ ಉದ್ಯಮಭಾಗ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮುದುಕಪ್ಪ ಉದಗಟ್ಟೆ ಹೈಡ್ರಾಮಾ ಮಾಡಿದವರು.

ಎರಡು ದಿನ ರಜೆ ಹೋಗಿ ಬಂದಿದ್ದ ಅವರಿಗೆ ಡ್ಯೂಟಿ ಬದಲಿಸಲಾಗಿತ್ತು. ಸೂಚಿದ ಜಾಗಕ್ಕೆ ಹೋಗಬೇಕೆಂದು ಪಿಐ ಸೂಚನೆ ನೀಡಿದ್ದರು. ಆದರೆ ಈ ವೇಳೆ ವಿಷ ಸೇವಿಸುತ್ತೇನೆ ಎಂದು ಠಾಣೆಯಲ್ಲೇ ಮುದುಕಪ್ಪ ಹೈಡ್ರಾಮಾ ಮಾಡಿದ್ದು, ಮುದುಕಪ್ಪ ಠಾಣೆಯಲ್ಲಿ ಬಿದ್ದು ಹೊರಳಾಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಆರೋಗ್ಯ ತಪಾಸಣೆ ಮಾಡಿದಾಗ ಯಾವುದೇ ವಿಷ ಸೇವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಮೇಲಾಧಿಕಾರಿಗಳು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ಪಿಸಿ ನಡೆಯಿಂದಾಗಿ ಪಿಐ ಡಿ.ಕೆ. ಪಾಟೀಲ್ ಅವರಿಗೆ ಲೋ ಬಿಪಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಳ್ಳೂರ ಸಮೇಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಉದ್ಯಮಭಾಗ ಠಾಣೆಗೆ ಎಸಿಪಿ ಶೇಖರಪ್ಪ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಠಾಣೆಯಲ್ಲಿ ನಡೆದ ಹೈಡ್ರಾಮಾದ ಬಗ್ಗೆ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read