ಬೆಳಗಾವಿ: ಮದುವೆಗೆ ಒಂದು ದಿನ ಮೊದಲು ವಧು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದೆ.
ಶೃತಿ ಬುರಡ್ (24) ಮೃತ ವಧು. ಅರಿಷಿಣ ಶಾಸ್ತ್ರದ ದಿನವೇ ವಧು ಸಾವಿಗೆ ಶರಣಾಗಿದ್ದಳೆ. ವರನ ತಾಯಿಗೆ ಕುರುಡು ಎಂಬ ವಿಷಯ ತಿಳಿದು ಆಘಾತಗೊಂಡ ವಧು ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಮೇ 24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.