BIG NEWS: ವರುಣಾರ್ಭಟಕ್ಕೆ ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: 9 ಜನರು ಸಾವು

ಇಟಾನಗರ: ಅರುಣಾಚಲ ಪ್ರದೇಶ, ಅಸ್ಸಾಂ ರಾಜ್ಯಗಳಲ್ಲಿ ವರುಣಾರ್ಭಟಕ್ಕೆ ಭಾರಿ ಭೂಕುಸಿತ, ಗುಡ್ಡಕುಸಿತ ಸಂಭವಿಸಿದ್ದು, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ರಣಮಳೆಗೆ ಅರುಣಾಚಲ ಪ್ರದೇಶದಲ್ಲಿ 9 ಜನರು ಸಾವನ್ನಪ್ಪಿದ್ದಾರೆ.

ಈಸ್ಟ್ ಕಮಾಂಗ್ ಜಿಲ್ಲೆಯಲ್ಲಿ ಬೃಹತ್ ಗುಡ್ದ ಕುಸಿದ ಪರಿಣಾಮ 7 ಜನರು ಮೃತಪಟ್ಟಿದ್ದಾರೆ. ಲೋವರ್ ಸುಬನ್ಸುರಿ ಪ್ರದೇಶದಲ್ಲಿ ಗುಡ್ದ ಕುಸಿತಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಮನೆಗಳು ಸಂಪೂರ್ಣ ನೆಲಸಮವಾಗಿವೆ.

ಈಸ್ಟ್ ಕಮಾಂಗ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಗುಡ್ಡ ಕುಸಿದು ಬಿದ್ದಿದ್ದೆ. ಗುಡ್ದ ಕುಸಿದ ಹೊಡೆತಕ್ಕೆ ರಸ್ತೆ ಮೇಲಿನ ವಾಹನಗಳು ಕಮರಿಗೆ ಉರುಳಿಬಿದ್ದಿವೆ. ಮಳೆ ನೀರು, ಕೆಸರು ನೀರಿನಲ್ಲಿ ಮೃತದೇಹಗಳು ಹೂತುಹೋಗಿವೆ. ಹಲವರು ಕಣಮರೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿರುವ ಎನ್ ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read