ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ-ಹಣ್ಣಿನ ದರ ಏರಿಕೆ

ಬೆಂಗಳೂರು : ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ-ಹಣ್ಣಿನ ದರ ಕೂಡ ಏರಿಕೆಯಾಗಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ರಾಜ್ಯದ ಜನರು ಭರ್ಜರಿ ಸಿದ್ದತೆಯಲ್ಲಿ ತೊಡಗಿದ್ದಾರೆ. ಆದರೆ    ಹಬ್ಬದ ಹಿನ್ನೆಲೆ ಹಣ್ಣು, ಹೂವಿನ ದರ ಗಗನಕ್ಕೇರಿದೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್ ನಲ್ಲಿ ಹಬ್ಬದ ಹಿನ್ನೆಲೆ ಹೂವು-ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕನಕಾಂಬರ ಕೆಜಿಗೆ 1,200 – 1,500 ರೂಗೆ ಮಾರಾಟವಾಗುತ್ತಿದ್ದರೆ , ಗುಲಾಬಿ 150 – 200 ರೂ, ಮಲ್ಲಿಗೆ ಕೆಜಿಗೆ 600 – 800 ರೂ. ಸೇವಂತಿಗೆ 250 – 300 ರೂ.ತಾವರೆ ಹೂ ಜೋಡಿ 50 – 100 ರೂಗೆ ಮಾರಾಟವಾಗುತ್ತಿದೆ.

ಸೇಬು 200 – 300 ರೂ. ಕಿತ್ತಲೆ 200 ರೂ. ದ್ರಾಕ್ಷಿ 200 ರೂ. ದಾಳಿಂಬೆ-180-200 ರೂವೆರೆಗೆ ಮಾರಾಟವಾಗುತ್ತಿದೆ. ಹಬ್ಬಕ್ಕೆ ಹೂ ಹಾಗೂ ಹಣ್ಣುಗಳ ದರದಲ್ಲಿ ಏರಿಕೆಯಾಗಿರುವುದು ಜನ ಸಾಮಾನ್ಯರು ಹೂ ಹಣ್ಣು ಕೊಂಡೊಯ್ಯಲು ಕೂಡ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read