ಹೃದಯಸ್ತಂಭನವಾದ್ರೂ ಸಮಯ ಪ್ರಜ್ಞೆ ತೋರಿ 40 ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶಾಲಾ ಬಸ್ ಚಾಲಕ

ಅಮರಾವತಿ: ಶಾಲಾ ಬಸ್ ಚಾಲನೆ ಮಾಡುವಾಗಲೇ ಚಾಲಕನಿಗೆ ಹೃದಯಸ್ತಂಭನ ಆಗಿದ್ದು, ಅವರು 40 ಮಕ್ಕಳ ಜೀವ ಉಳಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ಬುಧವಾರ ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವೇಳೆ ಘಟನೆ ನಡೆದಿದೆ. ಚಾಲಕ 53 ವರ್ಷದ ಗುರ್ರಾಳ ಏಡುಕೊಂಡಲು ಎಂಬಾತ ಮೈಲಾವರಂ, ಉಪ್ಪಲಪಾಡು, ವೆಂಪಾರ ಗ್ರಾಮಗಳ ಮೂಲಕ ಅಡ್ಡಂಕಿ ಪಟ್ಟಣದ ಖಾಸಗಿ ಶಾಲಾ ಬಸ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಉಪ್ಪಲಪಾಡು ಸಮೀಪ ಚಾಲಕನಿಗೆ ಹೃದಯಾಘಾತವಾಗಿದೆ. ಆದರೆ, ಅವರು ಪ್ರಾಣಾಪಾಯಕ್ಕೆ ಒಳಗಾಗುವ ಮೊದಲು, ಕೆಲವೇ ಸೆಕೆಂಡುಗಳಲ್ಲಿ, ವಾಹನವನ್ನು ನಿಲ್ಲಿಸಿ ದುರಂತ ತಪ್ಪಿಸಿದ್ದಾರೆ.

ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅದೇ ಬಸ್ ನಲ್ಲಿ ಮತ್ತೊಬ್ಬ ಚಾಲಕ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ದಿದ್ದಾನೆ. ಪೊಲೀಸರು ತನಿಖೆಗೆ ಕೈಗೆತ್ತಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read