ಕಾಡು ಪ್ರಾಣಿಗಳಿಗೆ ತೊಂದರೆ ಕೊಡ್ತೀರಾ ? ಹಾಗಾದ್ರೆ ದಂಡ ತೆರಲು ಸಿದ್ದರಾಗಿ | Video

ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ (ಎಂಟಿಆರ್) ಒಳಗೆ ಮಸಿನಗುಡಿ-ತೆಪ್ಪಕಾಡು ರಸ್ತೆಯಲ್ಲಿ ಚುಕ್ಕೆ ಜಿಂಕೆಗಳ ಹಿಂಡಿಗೆ ಅಡ್ಡಿಪಡಿಸಿದ ಆಂಧ್ರಪ್ರದೇಶದ ಮೂವರು ಪ್ರವಾಸಿಗರಿಗೆ ಶನಿವಾರ ಮಸಿನಗುಡಿ ಅರಣ್ಯಾಧಿಕಾರಿಗಳು 15,000 ರೂ. ದಂಡ ವಿಧಿಸಿದ್ದಾರೆ.

ಅರಣ್ಯದ ಬಳಿ ಜಿಂಕೆಗಳ ಹಿಂಡು ಮೇಯುತ್ತಿದ್ದುದನ್ನು ಗಮನಿಸಿದ ಗುಂಪು ಮಂಡ್ರಾಡಿಯಾರ್‌ನಲ್ಲಿ ವಾಹನ ನಿಲ್ಲಿಸಿದಾಗ ಈ ಘಟನೆ ನಡೆದಿದೆ. ಅಬ್ದುಲ್ಲಾ ಖಾನ್ (23), ಅಬ್ದುಲ್ ಅಜೀಜ್ (28), ಮತ್ತು ಇಬ್ರಾಹಿಂ ಶೇಖ್ (30) ಎಂದು ಗುರುತಿಸಲಾದ ಮೂವರು ಜೋರಾಗಿ ಕೂಗುತ್ತಾ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದು, ಈ ಪೈಕಿ ಒಬ್ಬಾತ ಜಿಂಕೆಗಳ ಹಿಂಡನ್ನು ಬೆನ್ನಟ್ಟಿದ್ದಾನೆ. ಇದರಿಂದ ಭಯಭೀತವಾದ ಜಿಂಕೆಗಳು ಕಾಡಿನೊಳಗೆ ಓಡಿವೆ.

ಈ ವೇಳೆ ಅಚಾನಕ್ಕಾಗಿ ಬಂದ ಮಸಿನಗುಡಿ ಅರಣ್ಯ ರೇಂಜ್ ಆಫೀಸರ್ ಎನ್. ಬಾಲಾಜಿ ಕೃತ್ಯವನ್ನು ಕಣ್ಣಾರೆ ಕಂಡು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಎಂಟಿಆರ್ ಉಪನಿರ್ದೇಶಕ ಪಿ. ಅರುಣ್‌ಕುಮಾರ್ ಅವರ ಸೂಚನೆ ಮೇರೆಗೆ 15,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಿದ ನಂತರ, ಕಠಿಣ ಎಚ್ಚರಿಕೆಯೊಂದಿಗೆ ಮೂವರನ್ನೂ ಬಿಡುಗಡೆ ಮಾಡಲಾಗಿದೆ ಈ ಘಟನೆಯನ್ನು ದಾರಿಹೋಕರು ವಿಡಿಯೋ ರೂಪದಲ್ಲಿ ಕೂಡ ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್‌ ಆಗಿದೆ.

ಬೆಂಗಳೂರಿನಿಂದ 240 ಕಿಮೀ ಮತ್ತು ಊಟಿಯಿಂದ 68 ಕಿಮೀ ದೂರದಲ್ಲಿರುವ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶವು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ಜನಪ್ರಿಯ ಪ್ರವಾಸಿ ತಾಣವಾಗಿದೆ. ವನ್ಯಜೀವಿಗಳನ್ನು ಗೌರವಿಸುವ ಮತ್ತು ಅರಣ್ಯ ನಿಯಮಗಳನ್ನು ಪಾಲಿಸುವ ಪ್ರಾಮುಖ್ಯತೆಯನ್ನು ಅಧಿಕಾರಿಗಳು ನೀಡಿದ್ದು, ಅಜಾಗರೂಕ ನಡವಳಿಕೆಯು ಪ್ರಾಣಿಗಳಿಗೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಮಾನವ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read