ALERT : ಸಾರ್ವಜನಿಕರೇ ಎಚ್ಚರ : ಹಣ ಡಬಲ್ ಮಾಡುತ್ತೇವೆ ಎಂದು ‘ಫೈನಾನ್ಸ್ ಕಂಪನಿ’ಗಳಿಂದ 100 ಕೋಟಿಗೂ ಅಧಿಕ ವಂಚನೆ.!

ಮಂಡ್ಯ : ಹಣ ಡಬಲ್ ಮಾಡುತ್ತೇವೆ ಎಂದು ಫೈನಾನ್ಸ್ ಕಂಪನಿಗಳು 100 ಕೋಟಿಗೂ ಅಧಿಕ ಹಣ ವಂಚಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಹಿಂದೂಸ್ತಾನ್ ಸೇರಿ ವಿವಿಧ ಫೈನಾನ್ಸ್ ಕಂಪನಿಗಳು ಸಾರ್ವಜನಿಕರಿಗೆ ದೋಖಾ ಎಸಗಿದೆ. ನೀವು ಇಷ್ಟು ಹಣ ಕಟ್ಟಿದ್ರೆ ಡಬಲ್ ಮಾಡಿಕೊಡುತ್ತೇವೆ ಎಂದು ಹೇಳಿ ಜನರಿಂದ ಹಣ ಕಟ್ಟಿಸಿಕೊಂಡು ಬಾಂಡ್ ನ ಅವಧಿ ಮುಗಿದರೂ ಹಣ ನೀಡದೇ ವಂಚನೆ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.

10 ಸಾವಿರದಿಂದ 1 ಲಕ್ಷದವರೆಗೆ ಜನರು ಹಣ ಕಟ್ಟಿದ್ದಾರೆ. ಬಾಂಡ್ ಅವಧಿ ಮುಗಿದ್ರೂ ಹಣ ನೀಡದೇ ಖಾಸಗಿ ಕಂಪನಿಗಳು ವಂಚನೆ ಎಸಗಿದ್ದು, ಜನರು ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಇಂತಹ ಹಲವು ಪ್ರಕರಣಗಳು ರಾಜ್ಯದ ಹಲವೆಡೆ ವರದಿಯಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read