ALERT : ಗ್ರಾಹಕರೇ ಎಚ್ಚರ : ‘ಕೆವೈಸಿ’ ಅಪ್ ಡೇಟ್ ಸೋಗಿನಲ್ಲಿ ವೃದ್ದನ 3.5 ಲಕ್ಷ ಎಗರಿಸಿದ ಖದೀಮ

ಬೆಂಗಳೂರು :  ಕೆವೈಸಿ ಅಪ್ ಡೇಟ್ ಸೋಗಿನಲ್ಲಿ ಸೈಬರ್ ಖದೀಮನೋರ್ವ ವೃದ್ದನ 3.5 ಲಕ್ಷ ಎಗರಿಸಿದ ಘಟನೆ ವರದಿಯಾಗಿದೆ.  ನೀವು ಕೆವೈಸಿ ಅಪ್ ಡೇಟ್ ಮಾಡದೇ ಹೋದರೆ ನಿಮ್ಮ ಖಾತೆ ಬ್ಲಾಕ್ ಆಗಲಿದೆ ಎಂದು ನಂಬಿಸಿದ ಖದೀಮ ಹಣ ಎಗರಿಸಿದ ಘಟನೆ  ವರದಿಯಾಗಿದೆ.

ಕೊತ್ತನೂರಿನ ಗೆದ್ದಲಹಳ್ಳಿ ನಿವಾಸಿ ಜಾನ್‌ ವೆಸ್ಲಿ(77) ಎಂಬುವವರು ವಂಚನೆಗೊಳಗಾದ ವ್ಯಕ್ತಿ.  ಜಾನ್‌ ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ನಿಮ್ಮ ಕೆವೈಸಿ ಅಪ್ ಡೇಟ್ ಆಗಬೇಕು. ಇಲ್ಲವಾದಲ್ಲಿ ನಿಮ್ಮ ಅಕೌಂಡ್  ಬ್ಲಾಕ್ ಆಗುತ್ತೆ ಎಂದು ಹೆದರಿಸಿದ್ದಾನೆ.   ಈ ನಂಬರ್‌ಗೆ ಕರೆ ಮಾಡಿ ಎಂದು ಒಂದು ಮೊಬೈಲ್‌ ಸಂಖ್ಯೆಯನ್ನೂ ನೀಡಿದ್ದಾನೆ,  ಅಂತೆಯೇ  ಜಾನ್‌ ಆ  ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದಾರೆ.  ಇದನ್ನೇ ಬಂಡವಾಳ ಮಾಡಿಕೊಂಡ  ಜಾನ್‌  ಒಟಿಪಿ ಸಂಖ್ಯೆ ಪಡೆದುಕೊಂಡು  ಜಾನ್‌ ಅವರ ಬ್ಯಾಂಕ್‌ ಖಾತೆಯಿಂದ .3.50 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ಈ ಸಂಬಂಧ ಪೂರ್ವ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read