ರಾಮಲಲ್ಲಾನ ವಿಗ್ರಹವನ್ನು ಅಯೋಧ್ಯೆ ದೇವಾಲಯದಲ್ಲಿ ಇಂದು ಪ್ರತಿಷ್ಠಾಪಿಸಲಾಗಿದ್ದು, ಈ ಕಾರ್ಯಕ್ರಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ದೇವಾಲಯದ ಆವರಣದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ಗಳು ಹೂವಿನ ಮಳೆ ಸುರಿಸಿದವು. ಅಯೋಧ್ಯೆಯಲ್ಲಿ ಭಕ್ತರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದರು.
ಪ್ರತಿಷ್ಠಾಪನೆ ನಡೆಯುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ಗಳು ದೇವಾಲಯದ ಮೇಲೆ ಹೂವಿನ ಮಳೆ ಸುರಿಸಿದವು.
ಅಯೋಧ್ಯೆ ಧಾಮದಲ್ಲಿ ಶ್ರೀ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವ ಅಸಾಧಾರಣ ಕ್ಷಣವು ಎಲ್ಲರನ್ನೂ ಭಾವುಕರನ್ನಾಗಿ ಮಾಡಲಿದೆ. ಈ ದೈವಿಕ ಕಾರ್ಯಕ್ರಮದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಜೈ ಶ್ರೀ ರಾಮ್!” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
https://twitter.com/ANI/status/1749328599109496858?ref_src=twsrc%5Etfw%7Ctwcamp%5Etweetembed%7Ctwterm%5E1749328599109496858%7Ctwgr%5E7da86715b456ed8c7c653b847f83fbafce9f1e51%7Ctwcon%5Es1_&ref_url=https%3A%2F%2Fwww.news9live.com%2Findia%2Fram-mandir-live-22-january-2024-ayodhya-shree-ram-mandir-pran-pratishtha-ceremony-darshan-ram-lalla-latest-photos-videos-live-updates-2413754