ವಿವಾಹಿತೆಯೊಂದಿಗೆ ಪರಾರಿಯಾದ ವ್ಯಕ್ತಿ: ಪತಿ, ಪತ್ನಿ ಹುಡುಕಿ ಕೊಡಲು ಪ್ರತ್ಯೇಕ ದೂರು

ಬೆಂಗಳೂರು: ವಿವಾಹಿತನೊಬ್ಬ ವಿವಾಹಿತೆ ಜೊತೆ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಪುಟ್ಟಿನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ.

ಇಲಿಯಾಸ್ ನಗರದ ವಾಸೀಂ ಮತ್ತು ಕುಮಾರಸ್ವಾಮಿ ಲೇಔಟ್ ದಿಲ್ಶಾದ್ ಪರಾರಿಯಾಗಿದ್ದಾರೆ. ವಾಸಿಮ್ ಪತ್ನಿ ಸುಮಯಾ ಬಾನು ಪತಿ ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ. ಪತ್ನಿ ದಿಲ್ಶಾದ್ ಹುಡುಕಿ ಕೊಡುವಂತೆ ನಹಿಮ್ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪುಟ್ಟೇನಹಳ್ಳಿ ಠಾಣೆ ಪೋಲೀಸರು ವಾಸೀಂ ಮತ್ತು ದಿಲ್ಶಾದ್ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ವಾಸೀಂ ಮತ್ತು ಸುಮಯಾ ಬಾನು 7 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಂದು ಮಗುವಿದೆ. ದಿಲ್ಷಾದ್ ಮತ್ತು ನಹಿಮ್ 18 ವರ್ಷದ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದರೆ. ವಾಸೀಂ ಮತ್ತು ದಿಲ್ಶಾದ್ ನಡುವೆ ಅನೈತಿಕ ಸಂಬಂಧ ಬೆಳೆದಿದ್ದು, ಕಳೆದ ಡಿಸೆಂಬರ್ ನಲ್ಲಿ ಇಬ್ಬರು ಜೆಪಿ ನಗರದ ಲಾಡ್ಜ್ ಒಂದರಲ್ಲಿ ಏಕಾಂತದಲ್ಲಿದ್ದಾಗ ಸುಮಯಾ ಬಾನು ಕುಟುಂಬದವರು ದಾಳಿ ಮಾಡಿದ್ದು, ಹೈಡ್ರಾಮಾವೇ ನಡೆದಿದೆ. ಪೊಲೀಸರು ಇಬ್ಬರನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಕಳೆದ ನಾಲ್ಕು ದಿನಗಳಿಂದ ವಾಸೀಂ ಮತ್ತು ದಿಲ್ಶಾದ್ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read