BIG NEWS: ಬೆಸ್ಕಾಂ ನಕಲಿ ನೇಮಕಾತಿ ಪ್ರಕರಣ; ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಬೆಸ್ಕಾಂ ಗೆ ನಕಲಿ ನೇಮಕಾತಿ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿಗಳನ್ನು ಬೆಂಗಳೂರು ಹೈಗ್ರೌಂಡ್ಸ್ ಠಾಣೆ ಪೊಲಿಸರು ಬಂಧಿಸಿದ್ದಾರೆ.

ವೈಭವ್, ಶಿವಪ್ರಸಾದ್, ವಿಜಯಕುಮಾರ್, ಪ್ರದೀಪ್, ಪುರುಷೋತ್ತಮ ಬಂಧಿತ ಆರೋಪಿಗಳು.

20 ಲಕ್ಷ ರೂಪಾಯಿ ಹಣ ಪಡೆದು ನಕಲಿ ನೇಮಕಾತಿ ಮಾಡಿ ಜನರಿಗೆ ವಂಚಿಸಿದ್ದರು. ಬೆಂಗಳೂರಿನ ವಿದ್ಯುತ್ ಕಂಪನಿ ಅಧೀಕ್ಷಕರ ಹೆಸರಿನಲ್ಲಿ ನೇಮಕಾತಿ ಆರ್ಡರ್ ನೀಡಿದ್ದರು. ಅಲ್ಲದೇ ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿ ಕುಟೀವ್ ಇಂಜಿನಿಯರ್ ಹೆಸರಲ್ಲಿ ನಕಲಿ ಸೀಲು ಹಾಕಿ ಹಣ ಕೊಟ್ಟ ಉದ್ಯೋಗ ಆಕಾಂಕ್ಷಿಗಳಿಗೆ ಆದೇಶ ಪತ್ರ ನೀಡಿದ್ದರು. ನೇಮಕಾತಿ ಆದೇಶ ಪತ್ರ ಹಿಡಿದು ಕಚೇರಿಗೆ ಬಂದಾಗ ಅಕ್ರಮ ನೇಮಕಾತಿ ಪ್ರಕರಣ ಬೆಳಕಿಗೆ ಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read