ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಇನೋವಾಗೆ ಆಲ್ಟೊ ಕಾರ್ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಭೀಕರ ಅಪಘಾತ

ರಾಮನಗರ: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ದುರಂತ ಸಂಭವಿಸಿದೆ.

ಆಲ್ಟೋ ಕಾರ್ ನ ಟೈಯರ್ ಸ್ಪೋಟವಾಗಿ ಇನೋವಾ ಕಾರ್ ಗೆ ಡಿಕ್ಕಿ ಹೊಡೆದಿದ್ದು, ಆಲ್ಟೋ ಕಾರ್ ನಲ್ಲಿದ್ದ ದಂಪತಿ, ಮೂವರು ಪುತ್ರಿಯರು ಸಾವನ್ನಪ್ಪಿದ್ದಾರೆ. ರವಿ ಪೂಜಾರ್(45), ಲಕ್ಷ್ಮಿ ಪೂಜಾರ್(40), ಪುತ್ರಿಯರಾದ ಇಂಚರಾ(15), ಶಾಂತಲಾ(10), ಸಿರಿ ಪೂಜಾರ್(3) ಮೃತಪಟ್ಟವರು ಎಂದು ಹೇಳಲಾಗಿದೆ.

ಬೆಂಗಳೂರಿನ ಕೆಂಗೇರಿಯಲ್ಲಿ ರವಿ ಪೂಜಾರ್ ಕುಟುಂಬ ವಾಸವಾಗಿತ್ತು. ರವಿ ಪೂಜಾರ್ ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಕ್ಲರ್ಕ್ ಆಗಿದ್ದರು. ಬೆಂಗಳೂರಿನಿಂದ ಟಿ. ನರಸೀಪುರಕ್ಕೆ ರವಿ ಪೂಜಾರ್ ಕುಟುಂಬ ತೆರಳುತ್ತಿತ್ತು. ಲಂಬಾಣಿ ತಾಂಡ್ಯಾ ಬಳಿ ಆಲ್ಟೋ ಕಾರ್ ನ ಟೈಯರ್ ಸ್ಪೋಟವಾಗಿ ದುರಂತ ಸಂಭವಿಸಿದೆ. ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read