BREAKING : ಹಾಸನದಲ್ಲಿ ‘ಪಾಗಲ್ ಪ್ರೇಮಿ’ ಅಟ್ಟಹಾಸ : ಯುವತಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ.!

ಹಾಸನ : ಮದುವೆಗೆ ಒಪ್ಪದ ಯುವತಿ ಮೇಲೆ ಯುವಕನೋರ್ವ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ  ಕಾರಗೋಡು ಗ್ರಾಮದಲ್ಲಿ ನಡೆದಿದೆ.

ಮದುವೆಗೆ ನೋ… ಎಂದ ಯುವತಿ ಗಾನವಿ ಮೇಲೆ ಯುವಕ ಮೋಹಿತ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಯುವತಿಯ ಕೈ , ಕಾಲು, ಕಣ್ಣು ಸೇರಿ ವಿವಿಧ ಕಡೆ ಗಂಭೀರ ಗಾಯಗಳಾಗಿದೆ.

2 ವರ್ಷದಿಂದ ಗಾನವಿ ಹಾಗೂ ಮೋಹಿತ್ ಸ್ನೇಹಿತರಾಗಿದ್ದರು. ಆದರೆ ಕೆಲ ದಿನಗಳಿಂದ ಗಾನವಿ ಮೋಹಿತ್ ನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಬೇಸತ್ತ ಮೋಹಿತ್ ಮದುವೆಯಾಗುವಂತೆ ಗಾನವಿಗೆ ಕಾಟ ಕೊಡುತ್ತಿದ್ದನು ಎನ್ನಲಾಗಿದೆ. ಮೋಹಿತ್ ಕಾಟದ ಬಗ್ಗೆ ಯುವತಿ ಪೋಷಕರಿಗೆ ಕೂಡ ದೂರು ನೀಡಿದ್ದಳು. ಅಷ್ಟರಲ್ಲೇ ಯುವಕ ಮೋಹಿತ್ ಗಾನವಿ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿ ಗಾನವಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read