CRIME NEWS : ಅನುಮಾನದ ಪಿಶಾಚಿಯಾದ ಪಾಪಿ ಪೊಲೀಸ್ : ಬಾಣಂತಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದ

ಮನುಷ್ಯನಲ್ಲಿ ಅನುಮಾನವೆಂಬ ಪಿಶಾಚಿ ಹೊಕ್ಕಿದ್ರೆ ಆತ ಎಂತಹ ಕೃತ್ಯಕ್ಕೆ ಬೇಕಾದರೂ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ.ಪಾಪಿ ಪತಿಯೋರ್ವ ಅದರಲ್ಲೂ ಪೊಲೀಸ್ ಹುದ್ದೆಯಲ್ಲಿದ್ದ ಗಂಡ ತನ್ನ ಬಾಣಂತಿ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಂದಿದ್ದಾನೆ.

ಹೊಸಕೋಟೆ ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಕೊಳತೂತು ನಿವಾಸಿ ಪ್ರತಿಭಾ (23) ಎಂದು ಗುರುತಿಸಲಾಗಿದೆ.ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯಲ್ಲಿದ್ದ ಕಿಶೋರ್ ಎಂಬಾತ ತನ್ನ ಪತ್ನಿಯನ್ನೇ ಕೊಂದಿದ್ದಾನೆ. 10 ದಿನದ ಮಗು ತಾಯಿಯನ್ನು ಕಳೆದು ಅನಾಥವಾಗಿದೆ.

ಒಂದು ವರ್ಷದ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬರು ಬರುತ್ತಾ ಪತಿ ತನ್ನ ವರಸೆ ಶುರು ಮಾಡಿದ. ಹೆಂಡತಿಯನ್ನು ಪದೇ ಪದೇ ಹೀಯಾಳಿಸುತ್ತಿದ್ದನು. ಈ ಸಂಬಂಧ ಹಲವು ಬಾರಿ ಗಲಾಟೆ ಕೂಡ ನಡೆದಿತ್ತು.

ನಂತರ ಪತ್ನಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ತವರು ಮನೆಯಲ್ಲಿ ಆರೈಕೆಯಲ್ಲಿದ್ದ ಪತ್ನಿಯನ್ನು ನೋಡಲು ಬಂದಿದ್ದ ಕಿಶೋರ್   ಯಾರೂ ಇಲ್ಲದ ಸಮಯದಲ್ಲಿ ತನ್ನ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನು ತಾನೇ ಫ್ಯಾನ್ ಗೆ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ. ಸದ್ಯ ತಲೆಮರೆಸಿಕೊಂಡ ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read