alex Certify ಪ್ರಿಯತಮೆಯನ್ನೇ ಹತ್ಯೆಗೈದು, ಮಗುವನ್ನು ರಸ್ತೆ ಬದಿ ಬಿಸಾಕಿ ಹೋಗಿದ್ದ ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆಯನ್ನೇ ಹತ್ಯೆಗೈದು, ಮಗುವನ್ನು ರಸ್ತೆ ಬದಿ ಬಿಸಾಕಿ ಹೋಗಿದ್ದ ಆರೋಪಿ ಅರೆಸ್ಟ್

ತುಮಕೂರು: ಮಹಿಳೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತುಮಕೂರಿನ ದೊಡ್ದಗುಣಿ ಬಳಿ ರಸ್ತೆ ಬಳಿ ಮಹಿಳೆಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಚೇಳೂರು ಪೊಲೀಸರಿಗೆ ಘಟನಾ ಸ್ಥಳದಲ್ಲೇ ಕೊಲೆಗಾರನ ಬಗ್ಗೆ ಸುಳಿವು ಸಿಕ್ಕಿತ್ತು.

ಪೆಟ್ರೋಲ್ ಬಾಟಲ್ ಆರೋಪಿ ಪತ್ತೆಗೆ ಸಹಾಯವಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಮೇಟಗಳ್ಳಿಯ ಬಿಎಂ ಸಿ ನಗರದ ರಿಕ್ಸಾನಾ (21) ಕೊಲೆಯಾದ ಮಹಿಳೆ. ರುಕ್ಸಾನಾ ಕೆಲ ದಿನಗಳಿಂದ ಕಾಣೆಯಾಗಿದ್ದರು. ತುಮಕೂರಿನ ದೊಡ್ಡಗುಣಿ ಬಳಿ ಸಿಕ್ಕ ಶವಕ್ಕೂ ರುಕ್ಸಾನಾ ಬಗ್ಗೆಯೂ ಅನುಮಾನಗೊಂಡ ಪೊಲೀಸರು ಮೈಸೂರಿನಲ್ಲಿದ್ದ ಆಕೆಯ ತಾಯಿಯನ್ನು ಕರೆದು ಶವ ತೋರಿಸಿದ್ದಾರೆ. ಈ ವೇಳೆ ಅದು ರುಕ್ಸಾನಾ ಶವ ಎಂಬುದು ಖಚಿತವಾಗಿದೆ.

ಮೈಸೂರಿನ ಪೇಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರುಕ್ಸಾನಾಳಿಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ನಾಯಕ್ ಪರಿಚಯವಾಗಿ ಸ್ನೇಹ ಬೆಳೆದು ಪ್ರೇಮಾಂಕುರವಾಗಿದೆ. ಆದರೆ ಚಿಕ್ಕಮಾಲೂರು ಮೂಲದ ಪ್ರದೀಪ್ ನಾಯಕ್ ಗೇ ಅದಾಗಲೇ ಮದುವೆಯಾಗಿ ಮಕ್ಕಳು ಇದ್ದಾರೆ. ಕೆಲ ದಿನಗಳ ಬಳಿಕ ಪ್ರದೀಪ್ ಬೆಂಗಳೂರಿನ ಪೀಣ್ಯ ಬಳಿಯ ಕಂಪನಿಗೆ ಕೆಲಸಕ್ಕೆಸೇರಿದ್ದ. ಆದಾಗ್ಯೂ ರುಕ್ಸಾನಾ ಹಾಗೂ ಪ್ರದೀಪ್ ಸ್ನೇಹ ಸಲುಗೆ ಮುಂದುವರೆದಿತ್ತು.

ಈ ನಡುವೆ ರುಕ್ಸಾನಾ ಪ್ರದೀಪ್ ನಿಂದ ಗರ್ಭಿಣಿಯಾಗಿದ್ದಳು. ಬಳಿಕ ಮೈದ್ಸೂರಿನಿಂದ ಕಡೂರಿಗೆ ಕರೆತಂದು ರುಕ್ಸಾನಾಳಿಗೆ ಬಾಡಿಗೆ ರೂಮ್ ಮಾಡಿ ಇರಿಸಿದ್ದನಂತೆ. ಒಂದು ತಿಂಗಳ ಹಿಂದಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿ ರುಕ್ಸಾನಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ರುಕ್ಸಾನಾ ಪ್ರದೀಪ್ ನಾಯಕ್ ಗೆ ತನ್ನನ್ನು ಮದುವೆಯಾಗುವಂತೆ ಹೇಳುತ್ತಿದ್ದರೂ ಆತ ಮದುವೆಯಾಗದೇ ತಪ್ಪಿಸಿಕೊಂಡು ಒಡಾಡುತ್ತಿದ್ದ ಎನ್ನಲಾಗಿದೆ. ರುಕ್ಸಾನಾ ಮದುವೆಗೆ ಬಲವಂತ ಮಾಡುತ್ತಿದ್ದಂತೆ ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಒಂದು ತಿಂಗಳ ಮಗು ಸಮೇತ ರುಕ್ಸಾನಾಳನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟ ಪ್ರದೀಪ್, ತುಮಕೂರಿನ ದೊಡ್ಡಗುಣಿ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ಮಗು ಎತ್ತಿಕೊಂಡು ಕುಳಿತಿದ್ದ ರುಕ್ಸಾನಾಳಿಗೆ ಹಿಂಬದಿಯಿಂದ ಬಂದು ಆಕೆಯ ದುಪ್ಪಟ್ಟಾದಿಂದಲೇ ಆಕೆಯ ಕತ್ತು ಬಿಗಿದು ಕೊಲೆಗೈದಿದ್ದಾನೆ. ಈ ವೇಳೆ ಕೈಲಿದ್ದ ಮಗು ಜಾರಿ ಕೆಳಗೆ ಬಿದ್ದಿದೆ. ರುಕ್ಸಾನಾಳನ್ನು ಪೆಟ್ರೋಲ್ ನಿಂದ ಸುಟ್ಟು ಹಾಕಿ, ಮಗುವನ್ನು ಎತ್ತಿಕೊಂಡು ಬೆಂಗಳೂರಿನತ್ತ ಹೊರಟಿದ್ದಾನೆ.

ಬಳಿಕ ನೆಲಮಂಗಲದ ಬಳಿ ಒಂದು ತಿಂಗಳ ಕಂದನನ್ನು ರಸ್ತೆ ಬದಿ ಬಿಸಾಕಿ ಹೋಗಿದ್ದಾನೆ. ಇದೀಗ ರುಕ್ಸಾನಾ ಮೃತದೇಹದ ಬಳಿ ಸಿಕ್ಕ ಪೆಟ್ರೋಲ್ ಬಾಟಲ್ ನಿಂದ ಆರೋಪಿ ಪತ್ತೆಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...