![](https://kannadadunia.com/wp-content/uploads/2023/04/183605-congress-750x430-1.jpg)
ಬೆಂಗಳೂರು : ರೈತರ ಆದಾಯ ದುಪ್ಪಟ್ಟು ಆದಂತೆಯೇ ಈ 29 ರೂಪಾಯಿಯ ‘ಭಾರತ್ ಅಕ್ಕಿ’ ಕೂಡ, ಕನ್ನಡಿಯೊಳಗೆ ಗಂಟನಿಟ್ಟು ಜನರನ್ನು ಮೂರ್ಖರಾನ್ನಾಗಿಸುವ ಮತ್ತೊಂದು ಹೊಸ ಸ್ಕೀಮ್ ಇದು ಎಂದು ಕೇಂದ್ರ ಸರ್ಕಾರದ ಭಾರತ್ ಅಕ್ಕಿ ಯೋಜನೆ ಕುರಿತು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಪೋಸ್ಟ್ ಮಾಡಿರುವ ಕಾಂಗ್ರೆಸ್, ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ಬಂದಂತೆ, ಪ್ರತಿಯೊಬ್ಬರ ಅಕೌಂಟ್ ಗೆ ₹15 ಲಕ್ಷ ಬಂದಂತೆ, ಒಂದು ಡಾಲರ್ ಗೆ 15 ರೂಪಾಯಿಯಾದಂತೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾದಂತೆ,ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಭಾರತಕ್ಕೆ ಬಂದಂತೆ,ದೇಶಕ್ಕೆ ಅಚ್ಚೆ ದಿನ್ ಬಂದಂತೆ, 2022ರ ಒಳಗೆ ಎಲ್ಲರಿಗೂ ಸೂರು ಸಿಕ್ಕಿರುವಂತೆ, ರೈತರ ಆದಾಯ ದುಪ್ಪಟ್ಟು ಆದಂತೆಯೇ ಈ 29 ರೂಪಾಯಿಯ ‘ಭಾರತ್ ಅಕ್ಕಿ’ ಕೂಡ, ಕನ್ನಡಿಯೊಳಗೆ ಗಂಟನಿಟ್ಟು ಜನರನ್ನು ಮೂರ್ಖರಾನ್ನಾಗಿಸುವ ಮತ್ತೊಂದು ಹೊಸ ಸ್ಕೀಮ್ ಇದು ವ್ಯಂಗ್ಯವಾಡಿದೆ.