ದೂರವಾಗುತ್ತೆ ಹಣದ ಚಿಂತೆ, ಬಡವರನ್ನೂ ಶ್ರೀಮಂತರನ್ನಾಗಿ ಮಾಡುತ್ತೆ ಲಾಲ್ ಕಿತಾಬ್‌ನ ಈ ಅದ್ಭುತ ಪರಿಹಾರ…!

ಪ್ರತಿಯೊಬ್ಬ ವ್ಯಕ್ತಿಗೂ ಬಹಳಷ್ಟು ಸಂಪತ್ತನ್ನು ಹೊಂದಬೇಕು, ಆರಾಮವಾಗಿ ಬದುಕಬೇಕು ಎಂಬ ಆಸೆಯಿರುತ್ತದೆ. ಅನೇಕರು ಇದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಿದರೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಕೆಲವು ಪರಿಹಾರಗಳ ಮೊರೆಹೋಗಬಹುದು. ಜ್ಯೋತಿಷ್ಯದಲ್ಲಿ ಲಾಲ್ ಕಿತಾಬ್ (ಕೆಂಪು ಪುಸ್ತಕ) ಎಂಬ ಪುಸ್ತಕವಿದ್ದು, ಅದರಲ್ಲಿ ಅನೇಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ.

ಲಾಲ್ ಕಿತಾಬ್‌ನ ಈ ಖಚಿತವಾದ ಪರಿಹಾರಗಳು ವ್ಯಕ್ತಿಯ ಆರ್ಥಿಕ ಸಮಸ್ಯೆಯನ್ನು ಪರಿಹರಿಸಬಹುದು. ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ದೇವರ ಧ್ಯಾನ ಮಾಡಬೇಕು. ಪೂಜೆಯ ನಂತರ ಎರಡು ಲವಂಗವನ್ನು ದೀಪದಲ್ಲಿ ಹಾಕಿ ಮತ್ತು ಮನೆಯಾದ್ಯಂತ ತಿರುಗಿಸಬೇಕು. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ.

ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಗೋವಿನ ಸೇವೆಯನ್ನು ಸರ್ವಶ್ರೇಷ್ಠವೆಂದು ಪರಿಗಣಿಸಲಾಗಿದೆ. ಆದ್ದರಿಂದ ಹಸುವಿಗೆ ಪ್ರತಿದಿನ ಊಟ ಬಡಿಸುವುದು ಮತ್ತು ಬೆಲ್ಲ-ರೊಟ್ಟಿ ತಿನ್ನುವುದು ಮಂಗಳಕರ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ತುಂಬಿರುತ್ತದೆ.

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ವ್ಯಕ್ತಿ ಒಣ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಶನಿವಾರ ನದಿಯಲ್ಲಿ ತೇಲಿಬಿಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ದಿನ ಬೆಳಗ್ಗೆ ಸ್ನಾನದ ನಂತರ ಶಿವಲಿಂಗಕ್ಕೆ ಹಾಲಿನಿಂದ ಅಭಿಷೇಕ ಮಾಡುವುದು ಮಂಗಳಕರ. ಹೀಗೆ ಮಾಡುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ.

ಒಬ್ಬ ವ್ಯಕ್ತಿಯು ಕೆಟ್ಟ ಕಣ್ಣಿನಿಂದ ಪ್ರಭಾವಿತನಾಗಿದ್ದರೆ, ಆರೋಗ್ಯವು ಹದಗೆಟ್ಟಿದ್ದರೆ ಅದಕ್ಕೂ ಪರಿಹಾರವಿದೆ. ಕಪ್ಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನಕಾಯಿಯನ್ನು ಹಾಕಿ ಮುಖ್ಯ ದ್ವಾರಕ್ಕೆ ನೇತುಹಾಕಬೇಕು. ಹೀಗೆ ಮಾಡುವುದರಿಂದ ಕೆಟ್ಟ ಕಣ್ಣು ಬೀಳುವುದಿಲ್ಲ. ಈ ಎಲ್ಲಾ ಪರಿಹಾರಗಳನ್ನು ಲಾಲ್‌ ಕಿತಾಬ್‌ನಲ್ಲಿ ಉಲ್ಲೇಖಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read