ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, 144 ಪಿಎಸ್ ಐ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವೂ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಪಿಎಸ್ಐ ಸಿವಿಲ್ ರವರುಗಳ ವರ್ಗಾವಣೆ ಮಾಡಲಾಗಿದೆ.
ದಿನಾಂಕ: 30.01.2023 ರಂದು ಪೊಲೀಸ್ ಉಪ ಮಹಾ ನಿರೀಕ್ಷಕರು, ಈಶಾನ್ಯ ವಲಯ, ಕಲಬುರಗಿ ರವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಂತೆ, 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತ ಈಶಾನ್ಯ ವಲಯದ ಅಧೀನದಲ್ಲಿರುವ ಜಿಲ್ಲೆಗಳ ಮತ್ತು ಪೊಲೀಸ್ ಆಯುಕ್ತಾಲಯ, ಕಲಬುರಗಿ ನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಪಿ.ಎಸ್.ಐ. ಸಿವಿಲ್ ರವರುಗಳನ್ನು ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ಕುಲಂಕುಶವಾಗಿ ಪರಿಶೀಲಿಸಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.
![](https://kannadadunia.com/wp-content/uploads/2024/01/PSI-1-2.jpg)
![](https://kannadadunia.com/wp-content/uploads/2024/01/PSI-2-2.jpg)
![](https://kannadadunia.com/wp-content/uploads/2024/01/PSI-3.jpg)
![](https://kannadadunia.com/wp-content/uploads/2024/01/PSI-4.jpg)
![](https://kannadadunia.com/wp-content/uploads/2024/01/PSI-5.jpg)
![](https://kannadadunia.com/wp-content/uploads/2024/01/PSI-6.jpg)
![](https://kannadadunia.com/wp-content/uploads/2024/01/PSI-7.jpg)