alex Certify BREAKING NEWS: ಇಬ್ಬರು ಯುವಕರ ಗಲಾಟೆಗೆ ಅಮಾಯಕ ವೃದ್ಧ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಇಬ್ಬರು ಯುವಕರ ಗಲಾಟೆಗೆ ಅಮಾಯಕ ವೃದ್ಧ ಬಲಿ

ಮೈಸೂರು: ಇಬ್ಬರು ಯುವಕರ ನಡುವಿನ ಗಲಾಟೆ ಅಮಾಯಕ ವೃದ್ಧನ ಪ್ರಾಣವನ್ನೇ ತೆಗೆದಿದೆ. ಮೈಸೂರಿನ ವಿದ್ಯಾರಣ್ಯಪುರದಲ್ಲಿ ಈ ದುರಂತ ಸಂಭವಿಸಿದೆ.

ಇಬ್ಬರು ಯುವಕರ ನಡುವೆ ಜಗಳ ಆರಂಭವಾಗಿ ಇಬ್ಬರೂ ಬ್ಯಾಟ್ ನಿಂದ್ ಹೊಡೆದಾಡಿಕೊಂಡಿದ್ದಾರೆ. ಗಾಲೆಟೆ ನೋಡುತ್ತಿದ್ದ ವೃದ್ಧನಿಗೆ ಬ್ಯಾಟ್ ತಗುಲಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಗ್ರಹಾರದ ನಿವಾಸಿ ಲಿಂಗಣ್ಣ ಮೃತ ದುರ್ದೈವಿ. ವೆಂಕಟೇಶ್ ಹಾಗೂ ಆಕಾಶ್ ಎಂಬ ಯುವಕರು ಗಲಾಟೆ ಮಾಡುತ್ತಿದ್ದರು. ಈ ವೇಳೆ ವೃದ್ದ ಲಿಂಗಣ್ಣ ಅಲ್ಲಿಯೇ ನಿಂತಿದ್ದರು. ವೆಂಕಟೇಶ್ ಬ್ಯಾಟ್ ನಿಂದ ಆಕಾಶ್ ಗೆ ಬೀಸಿದ್ದಾನೆ. ಈ ವೇಳೆ ಆಕಾಶ್ ತಪ್ಪಿಸಿಕೊಂಡಿದ್ದು ಬ್ಯಾಟ್ ವೃದ್ಧರಿಗೆ ಬಡಿದಿದೆ. ಬ್ಯಾಟಿನ ಏಟಿಗೆ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವೆಂಕಟೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...