ಫಿಕ್ಸರ್ ಎಂದು ಶ್ರೀಶಾಂತ್ ಗೆ ಕೆಣಕಿದ ಗೌತಮ್ ಗಂಭೀರ್: ಮೈದಾನದಲ್ಲೇ ವಾಗ್ಯುದ್ದ

ಸೂರತ್: ಲೆಜೆಂಡ್ಸ್ ಲೀಗ್ ಟಿ20 ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಬೌಲರ್ ಶ್ರೀಶಾಂತ್ ಮತ್ತು ಗೌತಮ್ ಗಂಭೀರ್ ನಡುವೆ ವಾಗ್ಯುದ್ಧ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಶಾಂತ್ ತಮ್ಮನ್ನು ಗೌತಮ್ ಗಂಭೀರ್ ಅವರು ಫಿಕ್ಸರ್ ಎಂದು ಕೆಣಕಿದ್ದಾಗಿ ಆರೋಪಿಸಿದ್ದಾರೆ.

ಬುಧವಾರ ಇಂಡಿಯನ್ ಕ್ಯಾಪಿಟಲ್ ಮತ್ತು ಗುಜರಾತ್ ಜಯಂಟ್ಸ್ ನಡುವೆ ನಿರ್ಣಾಯಕ ಅರ್ಹತಾ ಪಂದ್ಯ ನಡೆದಿತ್ತು. ಗುಜರಾತ್ ತಂಡದ ಆಟಗಾರ ಶ್ರೀಶಾಂತ್ ಮತ್ತು ಕ್ಯಾಪಿಟಲ್ ತಂಡದ ನಾಯಕ ಗೌತಮ್ ಗಂಭೀರ್ ಅವರ ನಡುವೆ ಮಾತಿನ ಸಮರ ನಡೆದಿದ್ದು, ಅಂಪೈರ್ ಗಳು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಶ್ರೀಶಾಂತ್, ನಾನು ಯಾವುದೇ ಅವಾಚ್ಯ ಶಬ್ದ ಬಳಸಿಲ್ಲ. ಗೌತಮ್ ಗಂಭೀರ್ ಈ ಹಿಂದೆ ಹಲವರೊಂದಿಗೆ ಇದೇ ರೀತಿಯ ದುರ್ವರ್ತನೆ ತೋರಿದ್ದಾರೆ. ನನಗೆ ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read