ಪತಿಯಿಂದಲೇ ಘೋರ ಕೃತ್ಯ: ಮೂರು ತಿಂಗಳ ನಂತರ ಬಯಲಾಯ್ತು ಕೊಲೆ ರಹಸ್ಯ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿ ಮೃತದೇಹವನ್ನು ಹೂತು ಹಾಕಿದ್ದಾನೆ.

ಮೂರು ತಿಂಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. 29 ವರ್ಷದ ಶಾಂತಿ ಕೊಲೆಯಾದ ಮಹಿಳೆ. ಸಕಲೇಶಪುರ ತಾಲೂಕು ಬಾಗೇ ಗ್ರಾಮದ ಸಮೀಪ ಮಹಿಳೆಯ ಆಸ್ತಿ ಪಂಜರ ಪತ್ತೆಯಾಗಿದ್ದು, ಸಕಲೇಶಪುರ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಮೃತ ಶಾಂತಿ ಅವರ ಪತಿ ಆರೋಪಿ ಪವನ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಂಪತಿಯ ನಡುವೆ ಜಗಳದ ವೇಳೆ ಪತ್ನಿ ಮೇಲೆ ಹಲ್ಲೆ ನಡೆಸಿ ಪವನ್ ಕುಮಾರ್ ಕೊಲೆ ಮಾಡಿದ್ದ. ಮನೆ ಸಮೀಪ ಇರುವ ಹಳ್ಳದ ಬಳಿ ಗುಂಡಿ ತೆಗೆದು ಮೃತದೇಹ ಹೂತು ಹಾಕಿದ್ದ.

ನಾಯಿಗಳು ಗುರುವಾರ ದೇಹದ ಮೂಳೆಗಳನ್ನು ಎಳೆದಾಡಿದ್ದು, ತೋಟದ ಮಾಲೀಕರು ಸಕಲೇಶಪುರ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಕುಮಾರ್ ಪತ್ನಿ ಕೊಲೆ ಮಾಡಿ ಮೃತದೇಹ ಹೂತು ಹಾಕಿದ ನಂತರ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದ. ಅಲ್ಲಿ ಪತ್ನಿ ಕಳೆದು ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read