alex Certify BREAKING : ನಾಳೆಯ ‘ಕರ್ನಾಟಕ ಬಂದ್’ ಗೆ ಖಾಸಗಿ ವಾಹನಗಳ ಒಕ್ಕೂಟದಿಂದ ನೈತಿಕ ಬೆಂಬಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಾಳೆಯ ‘ಕರ್ನಾಟಕ ಬಂದ್’ ಗೆ ಖಾಸಗಿ ವಾಹನಗಳ ಒಕ್ಕೂಟದಿಂದ ನೈತಿಕ ಬೆಂಬಲ

ಬೆಂಗಳೂರು : ನಾಳೆಯ ಕರ್ನಾಟಕ ಬಂದ್ ಗೆ ಖಾಸಗಿ ವಾಹನಗಳ ಒಕ್ಕೂಟ ಕೂಡ ನೈತಿಕ ಬೆಂಬಲ ನೀಡಿದೆ.

ಇಂದು ಸಭೆ ಬಳಿಕ ಮಾತನಾಡಿದ ರಾಜ್ಯ ಖಾಸಗಿ ವಾಹನಗಳ ಒಕ್ಕೂಟದ ಅದ್ಯಕ್ಷ ನಟರಾಜ್ ಶರ್ಮಾ ‘ ನಾಳಿನ ಕರ್ನಾಟಕ ಬಂದ್ ಗೆ ಬೆಂಬಲ ನೀಡುತ್ತೇವೆ, ಇಂದಿನ ಸಭೆಯಲ್ಲಿ ನಾಳೆ ನಡೆಯಲಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದರು.  ಈ ಹಿನ್ನೆಲೆ  ರಾಜ್ಯದಲ್ಲಿ ಆಟೋ, ಟ್ಯಾಕ್ಸಿ ಸಂಚಾರ ಸೇವೆ ಬಂದ್ ಆಗಲಿದೆ.

ಅದೇ ರೀತಿ ನಾವು ನಾಳೆ ಕರ್ನಾಟಕ ಬಂದ್ ಮಾಡುತ್ತಿಲ್ಲ. ಬದಲಾಗಿ ರಾಜ್ಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ರಾಜ್ಯ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಹೌದು, ತುರ್ತು ಸೇವೆ ಹೊರತುಪಡಿಸಿ ಎಲ್ಲ ಸೇವೆಗಳೂ ಬಂದ್ ಮಾಡಲು ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ನಿರ್ಧರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...